Advertisement

ಉಡುಪಿ: ದತ್ತುಗ್ರಾಮ ಸಂಕಲ್ಪಕ್ಕೆ ಚಾಲನೆ

12:44 AM Nov 27, 2022 | Team Udayavani |

ಉಡುಪಿ: ಎಂಜಿಎಂ ಕಾಲೇಜು ಟ್ರಸ್ಟ್‌ನ ಅಧ್ಯಕ್ಷರಾದ ಟಿ. ಸತೀಶ್‌ ಪೈ ಅವರ ಜನ್ಮದಿನದಂದು (ನ. 26) ಕಾಲೇಜಿನ ರೇಂಜರ್ ಹಾಗೂ ರೋವರ್ ಘಟಕ ಸಂಕಲ್ಪಿಸಿರುವ ದತ್ತು ಗ್ರಾಮ ಸ್ವೀಕಾರ ಯೋಜನೆಗೆ ಚಾಲನೆ ನೀಡಲಾಯಿತು.

Advertisement

ಟಿ. ಸತೀಶ್‌ ಪೈಯವರು ರೋವರ್ ಹಾಗೂ ರೇಂಜರ್ ಲೀಡರ್‌ ಅವಿನಾಶ್‌ ಆಚಾರ್ಯ ಹಾಗೂ ವನಿತಾ ಮಯ್ಯ ಅವರಿಗೆ ಕಾರ್ಯಯೋಜನೆ ಕುರಿತಾದ ದಾಖಲೆಯನ್ನು ಹಸ್ತಾಂತರಿಸಿ ಚಾಲನೆ ನೀಡಿದರು. ದತ್ತುಗ್ರಾಮ ಯೋಜನೆ ಪ್ರಸ್ತಾವಕ್ಕೆ ಮೆಚ್ಚುಗೆ ಸೂಚಿಸಿ ಶುಭಹಾರೈಸಿದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ ಆಳ್ವ, ಪದವಿ ಪ್ರಾಂಶುಪಾಲ ಪ್ರೊ| ಲಕ್ಷ್ಮೀ ನಾರಾಯಣ ಕಾರಂತ, ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. ಪತ್ರಿಕೋ ದ್ಯಮ ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next