Advertisement

ಉಡುಪಿ ಜಿಲ್ಲಾದ್ಯಂತ ಮಳೆ: ಜನಜೀವನ ಅಸ್ತವ್ಯಸ್ತ

08:54 PM Oct 12, 2021 | Team Udayavani |

ಉಡುಪಿ: ಜಿಲ್ಲಾದ್ಯಂತ ಮಂಗಳವಾರ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತ ಗೊಂಡಿತು.

Advertisement

ಅ.12ರ ಮುಂಜಾನೆ 8.30ರ ಹಿಂದಿನ 24 ಗಂಟೆಯಲ್ಲಿ ಉಡುಪಿ ತಾಲೂಕಿನಲ್ಲಿ 21.8 ಮಿ.ಮೀ., ಬ್ರಹ್ಮಾವರ 27 ಮಿ.ಮೀ., ಕಾಪು 38.8 ಮಿ.ಮೀ., ಕುಂದಾಪುರ 28 ಮಿ.ಮೀ., ಬೈಂದೂರು 27.9 ಮಿ.ಮೀ., ಕಾರ್ಕಳ 13.1 ಮಿ.ಮೀ., ಹೆಬ್ರಿ 18.4 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 23.7 ಮಿ.ಮೀ. ಮಳೆಯಾಗಿದೆ. ಕಾರ್ಕಳ ತಾ|ನ ಕಸಬಾ ಗ್ರಾಮದ ಉದಯ ಅವರ ಮನೆ ಭಾಗಶಃ ಹಾನಿಯಾಗಿದೆ.

ಮೆಸ್ಕಾಂಗೆ 55 ಲ.ರೂ. ನಷ್ಟ
ಮಂಗಳವಾರ ಸಂಜೆ 4.30ರ ಬಳಿಕ ಭಾರೀ ಮಳೆ ಸುರಿದ ಕಾರಣ ಜನರು ಭಾರೀ ಸಂಕಷ್ಟ ಅನುಭವಿಸಿದರು. ಹಲವಾರು ಮಂದಿ ಆಟೋರಿಕ್ಷಾಗಳನ್ನು ಏರಿ ಮನೆಗೆ ತೆರಳಿದರು.

ಮೆಸ್ಕಾಂಗೆ ಅಪಾರ ನಷ್ಟ
ಕೆಲವೆಡೆ ಸಿಡಿಲು, ಮಿಂಚಿನಿಂದ ವಿದ್ಯುತ್‌ ವ್ಯತ್ಯಯವಾಯಿತು. ನಗರದ ವಿವಿಧ ಭಾಗಗಳಲ್ಲಿ ಕೃತಕ ನೆರೆ ಉಂಟಾಯಿತು. ಜಿಲ್ಲೆಯಲ್ಲಿ ಕಳೆದ 12 ದಿನಗಳಿಂದ ಸುರಿಯುತ್ತಿರುವ ಮಳೆಗೆ 55.68 ಲ.ರೂ. ನಷ್ಟ ಉಂಟಾಗಿದೆ. 45 ವಿದ್ಯುತ್‌ ಕಂಬ, 37 ಟ್ರಾನ್ಸ್‌ ಫಾರ್ಮರ್‌, 3.61 ಕಿ.ಮೀ. ವಿದ್ಯುತ್‌ ತಂತಿ ಹಾನಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಕಂಪಿಸಿದ ಭೂಮಿ

Advertisement

 

Advertisement

Udayavani is now on Telegram. Click here to join our channel and stay updated with the latest news.

Next