Advertisement

Udupi: ಕಾರು ಮಾರಾಟದ ಹೆಸರಿನಲ್ಲಿ ವಂಚನೆ

09:21 PM Sep 27, 2024 | Team Udayavani |

ಉಡುಪಿ: ಕಾರು ಮಾರಾಟದ ಹೆಸರಿನಲ್ಲಿ ಆನ್‌ಲೈನ್‌ ಮೂಲಕ ವ್ಯಕ್ತಿಯೊಬ್ಬರಿಂದ ಸಾವಿರಾರು ರೂ. ಮುಂಗಡ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ.

Advertisement

ಮಂಜುನಾಥ ರೇವಣ್‌ಕರ್‌ ಹಾಗೂ ರವಿಚಂದ್ರ ಮಂಜುನಾಥ ರೇವಣ್‌ಕರ್‌ ಆರೋಪಿಗಳು. ಪುತ್ತೂರು ಗ್ರಾಮದ ಪದ್ಮಿನಿ ಕೆ. ಅವರು ಆನ್‌ಲೈನ್‌ನಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರು ಹುಡುಕಾಟ ಮಾಡಿದ್ದು, 2016 ಮಾಡೆಲ್‌ನ ಕಾರು ಇರುವುದು ತಿಳಿದಿತ್ತು. ಕಾರಿಗೆ ಮುಂಗಡವಾಗಿ ಮಣಿಪಾಲ ಬ್ರಾಂಚ್‌ನ ಕೆನರಾ ಬ್ಯಾಂಕ್‌ ಖಾತೆಯಿಂದ 20,000 ರೂ.ನಂತೆ ಒಟ್ಟು 40,000 ರೂ. ಹಣವನ್ನು ಫೋನ್‌ ಪೇ ಮೂಲಕ ಪಾವತಿಸಿದ್ದರು.

ಒಂದು ವಾರ ಕಳೆದರೂ ಈ ಬಗ್ಗೆ ಸರಿಯಾಗಿ ಪ್ರತಿಕ್ರಿಯೆ ಬಂದಿರಲಿಲ್ಲ. ಕಾರಿನ ಆವಶ್ಯಕತೆ ಇದ್ದು ಬೇರೆ ಕಡೆ ಕಾರು ಖರೀದಿಸುವುದಾಗಿ ತಿಳಿಸಿದ್ದು, ಮುಂಗಡ ಹಣವನ್ನು ನೀಡುವಂತೆ ಹೇಳಲಾಗಿತ್ತು. ಇದಕ್ಕೆ ಒಪ್ಪಿದ್ದ ಅವರು ಆ ಬಳಿಕ ಹಣವನ್ನು ನೀಡದೆ ಕಾರನ್ನೂ ನೀಡದೆ ವಂಚಿಸಿದ್ದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next