Advertisement

ಹಾಲು, ಪತ್ರಿಕೆ, ವೈದ್ಯಕೀಯ ಸೇವೆ ಬಿಟ್ಟು ಬೇರೆ ಯಾವುದಕ್ಕೂ ಅವಕಾಶವಿಲ್ಲ: ಉಡುಪಿ ಡಿಸಿ

04:16 PM Jun 01, 2021 | Team Udayavani |

ಉಡುಪಿ: ಕೋವಿಡ್ 19 ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಉಡುಪಿ ಜಿಲ್ಲಾಡಳಿತ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. 50ಕ್ಕಿಂತ ಹೆಚ್ಚು ಪ್ರಕರಣಗಳಿರುವ 35 ಗ್ರಾಮಗಳನ್ನು ಜೂ.2ರಿಂದ ಸಂಪೂರ್ಣ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದೆ. ಈ ಸಮಯದಲ್ಲಿ ಈ ಗ್ರಾಮಗಳಲ್ಲಿ ಹಾಲು, ಪತ್ರಿಕೆ, ವೈದ್ಯಕೀಯ ಸೇವೆಗೆ ಅವಕಾಶವಿದ್ದು, ದಿನಸಿ ಸೇರಿದಂತೆ ಇತರೆ ಅಗತ್ಯ ವಸ್ತು ಖರೀದಿಗೆ ಅವಕಾಶ ಇರುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

Advertisement

ಫೇಸ್ ಬುಕ್ ವಿಡಿಯೋದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಮುಂದಿನ 5 ದಿನ ಲಾಕ್ ಡೌನ್ ಆಗಿರುವ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ವಸ್ತುಗಳ ಖರೀದಿಗೆ ಮತ್ತು ಇತರ ಚಟುವಟಿಕೆಗಳಿಗೆ  ಅವಕಾಶವಿಲ್ಲ. ಈ ಗ್ರಾಮಗಳಲ್ಲಿ ಹಾಲು ಕರೆದು ಸೊಸೈಟಿಗೆ ಕೊಡುವ ರೈತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪತ್ರಿಕೆ ವಿತರಣೆ ಮಾಡಬಹುದು, ಉಳಿದಂತೆ ಮೆಡಿಕಲ್ ಶಾಪ್, ವೈದ್ಯರ ಕ್ಲಿನಿಕ್ ಗಳು ಮಾತ್ರ ತೆರೆದಿರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೋವಿಡ್ ನಿಂದ ಗುಣಮುಖನಾದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆ

ಯಾವೆಲ್ಲಾ ಗ್ರಾಮ ಪಂಚಾಯತ್ ಗಳು?

ಶಿರೂರು, ಜಡ್ಕಲ್‌, ಕಂಬದ ಕೋಣೆ, ನಾಡ, ಕಾವ್ರಾಡಿ, ಹೊಂಬಾಡಿ, ಮಂಡಾಡಿ, ಕೋಟೇಶ್ವರ, ಹಾಲಾಡಿ, ಇಡೂರು ಕುಂಜ್ಞಾಡಿ, ಆಜ್ರಿ, ಆಲೂರು, 38 ಕಳತ್ತೂರು, 80 ಬಡಗಬೆಟ್ಟು, ಅಲೆವೂರು, ಪೆರ್ಡೂರು, ತೆಂಕನಿಡಿಯೂರು, ಬೊಮ್ಮರ ಬೆಟ್ಟು, ಬೆಳಪು, ಬೆಳ್ಳೆ, ಪಡುಬಿದ್ರಿ, ಶಿರ್ವ, ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ, ಪಳ್ಳಿ, ನಿಟ್ಟೆ, ಮಿಯಾರು, ಬೆಳ್ಮಣ್‌, ಬೆಳ್ವೆ, ಮುದ್ರಾಡಿ, ವರಂಗ ಗ್ರಾಮ ಪಂಚಾಯತ್ ಗಳು ಬುಧವಾರದಿಂದ ರವಿವಾರದವರೆಗೆ ಲಾಕ್ ಡೌನ್ ನಲ್ಲಿರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next