Advertisement

Udupi ಕೋಟ್ಯಂತರ ರೂ. ವಂಚನೆ ಪ್ರಕರಣ: ಶಿವಪ್ರಸಾದ್‌ ಆಳ್ವ ಎಸ್‌ಪಿಪಿ ನೇಮಿಸಿದ ಸರಕಾರ

12:29 AM Sep 09, 2024 | Team Udayavani |

ಉಡುಪಿ: ಕೋಟ್ಯಂತರ ರೂ. ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ಮಂಗಳೂರು ವಲಯದ ಕಾನೂನು ಅಧಿಕಾರಿ (ಹಿರಿಯ) ಶಿವಪ್ರಸಾದ್‌ ಆಳ್ವ ಅವರನ್ನು ಸರಕಾರ ನೇಮಿಸಿದೆ.

Advertisement

ಅನಿವಾಸಿ ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್‌ ಕುಮಾರ್‌ ಶೆಟ್ಟಿ ಆಡಳಿತ ನಿರ್ದೇಶಕರಾಗಿರುವ ದುಬಾೖನ ಫಾರ್ಚೂನ್‌ ಗ್ರೂಪ್‌ ಆಫ್ ಹೊಟೇಲೊಂದರಲ್ಲಿ ಅಕೌಂಟೆಂಟ್‌ ಆಗಿದ್ದ ಬ್ರಹ್ಮಾವರದ ನಾಗೇಶ್‌ ಪೂಜಾರಿ 2.5 ಕೋ.ರೂ.ಗೂ ಅಧಿಕ ವಂಚಿಸಿದ್ದ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಕಳೆದ ವರ್ಷ ದೂರು ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುನ್ನಡೆಸಲು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ಶಿವಪ್ರಸಾದ್‌ ಆಳ್ವ ಅವರನ್ನು ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next