Advertisement

ಕೂಲಿ ಕಾರ್ಮಿಕನಿಗೆ ಜೀವ ಬೆದರಿಕೆ: ನಗರ ಠಾಣೆಯಲ್ಲಿ ಪ್ರಕರಣ ದಾಖಲು

07:24 AM Jan 10, 2023 | Team Udayavani |

ಉಡುಪಿ : ಕೂಲಿ ಕಾರ್ಮಿಕನಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಸಿಯೋದರಾಮ ರೆಡ್ಡಿ ಅವರು 15 ದಿನಗಳ ಹಿಂದೆ ಉಡುಪಿಗೆ ಕೂಲಿ ಕೆಲಸಕ್ಕೆಂದು ಬಂದು ಆದಿಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯ ಒಳಗಿರುವ ಎಸ್‌ಎಂಟಿ ಮಳಿಗೆಯಲ್ಲಿ ಕೂಲಿ ಕೆಲಸ ಮಾಡಿ ಅಲ್ಲಿಯೇ ರಾತ್ರಿ ವೇಳೆ ಮಲಗುತ್ತಿದ್ದರು.

Advertisement

ಜ. 7ರ ರಾತ್ರಿ ಅವರು ಮಳಿಗೆಯಲ್ಲಿ ಮಲಗಿದ್ದಾಗ ಆರೋಪಿ ವಿಜಯಪುರದ ಭೀಮನಗೌಡ ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next