Advertisement

ಉಡುಪಿ: ಡಿಸೆಂಬರ್ 24-25ರಂದು ಅಟಲ್ ಉತ್ಸವ; ರಾಷ್ಟ್ರಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

01:10 PM Dec 20, 2022 | Team Udayavani |

ಉಡುಪಿ: ಮಾಜಿ ಪ್ರಧಾನಿ, ಅಪ್ರತಿಮ ನಾಯಕ, ಶ್ರೇಷ್ಠ ಸಂಸದೀಯ ಪಟು, ಕವಿ ಹೃದಯಿ, ಭಾರತರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಮತ್ತು ಗ್ರಾಮಾಂತರ ವತಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್‌ 24 ಮತ್ತು 25ರಂದು “ಅಟಲ್‌ ಉತ್ಸವ’ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಉತ್ಸವದ ಅಂಗವಾಗಿ ಮಹೇಶ್‌ ಠಾಕೂರ್‌ ಅವರ ಪರಿಕಲ್ಪನೆ ಮತ್ತು ಸಂಕಲ್ಪದಡಿ ವಿನೂತನ ಪಂದ್ಯಾಟ ಕೂಡಾ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ .

Advertisement

“ಅಟಲ್‌ ಟ್ರೋಫಿ’

ಹೊನಲು ಬೆಳಕಿನ ರಾಷ್ಟ್ರಮಟ್ಟದ ಮುಕ್ತ ಪ್ರೊ ಕಬಡ್ಡಿ ಪಂದ್ಯಾಟ ಡಿ. 24ರ ಶನಿವಾರ ಸಂಜೆ 5ರಿಂದ ಮರುದಿನ ಮುಂಜಾನೆಯವರೆಗೆಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಆಕರ್ಷಕ ಬಹುಮಾನಗಳು;

Advertisement

ವಿಜೇತ ತಂಡಗಳಿಗೆ ಆಕರ್ಷಕ ಶಾಶ್ವತ ಫ‌ಲಕ ಮತ್ತು ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಥಮ ಬಹುಮಾನ: 1 ಲಕ್ಷ ರೂಪಾಯಿ.

ದ್ವಿತೀಯ ಬಹುಮಾನ: 75,000 ರೂ.

ತೃತೀಯ ಬಹುಮಾನ: 50,000 ರೂ.

ಚತುರ್ಥ ಬಹುಮಾನ: 25,000 ರೂ.

ಮಾಹಿತಿಗಾಗಿ ಸಂಪರ್ಕಿಸಿ: ಕಾರ್ಯಕ್ರಮದ ಸಂಚಾಲಕರು: ಗಿರೀಶ್‌ ಎಂ. ಅಂಚನ್‌ನಗರಸಭೆ ಸದಸ್ಯರು, ಉಡುಪಿ +91 9901947321

ಅದ್ದೂರಿ ತಯಾರಿ

ದೇಶದ ವಿವಿಧ ರಾಜ್ಯಗಳ ತಂಡಗಳಿಗೆ ಮುಕ್ತ ಆಹ್ವಾನ ನೀಡಲಾಗಿದೆ. ಎಂಜಿಎಂ ಮೈದಾನದಲ್ಲಿ ಪಂದ್ಯಾಟಕ್ಕೆ ಬೇಕಾದ ಎಲ್ಲ ಪೂರ್ವ ಸಿದ್ಧತೆಗಳನ್ನು ಭರದಿಂದ ಮಾಡಲಾಗುತ್ತಿದೆ. ಸುಮಾರು 10ರಿಂದ 15,000 ಕ್ರೀಡಾಸಕ್ತರು ಕುಳಿತು ಪಂದ್ಯಾಟ ವೀಕ್ಷಿಸಲು (ಗ್ಯಾಲರಿ) ವ್ಯವಸ್ಥೆ ಕಲ್ಪಿಸಲಾಗಿದೆ. ಮೈದಾನ ಸಮತಟ್ಟು, ವೇದಿಕೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಗಲಿರುಳೆನ್ನದೆ ಮಾಡುತ್ತಿದ್ದಾರೆ. ಜೀವನದ ಉದ್ದಕ್ಕೂ ನೆನಪಿಸುವಂತೆ ಸುಮಾರು 5 ಅಡಿ ಎತ್ತರದ ಆಕರ್ಷಕ ಟ್ರೋಫಿಗಳನ್ನು ಬಹುಮಾನವಾಗಿ ನೀಡಲಾಗುವುದು.

ಉದ್ಘಾಟನೆ ಸಮಾರಂಭ

ಕೇಂದ್ರದ ಯುವ ವ್ಯವಹಾರ ಮತ್ತು ಕ್ರೀಡಾ, ಮಾಹಿತಿ ತಂತ್ರಜ್ಞಾನ ಹಾಗೂ ಪ್ರಸಾರ ಇಲಾಖೆ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ಅಟಲ್‌ ಟ್ರೋಫಿಯನ್ನು ಉದ್ಘಾಟಿಸುವರು. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ, ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ನೇತೃತ್ವ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ರಘುಪತಿ ಭಟ್‌ ಪರಿಕಲ್ಪನೆ ಮತ್ತು ಅಧ್ಯಕ್ಷತೆ: ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌ ಅವರದ್ದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next