Advertisement
“ಅಟಲ್ ಟ್ರೋಫಿ’
Related Articles
Advertisement
ವಿಜೇತ ತಂಡಗಳಿಗೆ ಆಕರ್ಷಕ ಶಾಶ್ವತ ಫಲಕ ಮತ್ತು ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಥಮ ಬಹುಮಾನ: 1 ಲಕ್ಷ ರೂಪಾಯಿ.
ದ್ವಿತೀಯ ಬಹುಮಾನ: 75,000 ರೂ.
ತೃತೀಯ ಬಹುಮಾನ: 50,000 ರೂ.
ಚತುರ್ಥ ಬಹುಮಾನ: 25,000 ರೂ.
ಮಾಹಿತಿಗಾಗಿ ಸಂಪರ್ಕಿಸಿ: ಕಾರ್ಯಕ್ರಮದ ಸಂಚಾಲಕರು: ಗಿರೀಶ್ ಎಂ. ಅಂಚನ್ನಗರಸಭೆ ಸದಸ್ಯರು, ಉಡುಪಿ +91 9901947321
ಅದ್ದೂರಿ ತಯಾರಿ
ದೇಶದ ವಿವಿಧ ರಾಜ್ಯಗಳ ತಂಡಗಳಿಗೆ ಮುಕ್ತ ಆಹ್ವಾನ ನೀಡಲಾಗಿದೆ. ಎಂಜಿಎಂ ಮೈದಾನದಲ್ಲಿ ಪಂದ್ಯಾಟಕ್ಕೆ ಬೇಕಾದ ಎಲ್ಲ ಪೂರ್ವ ಸಿದ್ಧತೆಗಳನ್ನು ಭರದಿಂದ ಮಾಡಲಾಗುತ್ತಿದೆ. ಸುಮಾರು 10ರಿಂದ 15,000 ಕ್ರೀಡಾಸಕ್ತರು ಕುಳಿತು ಪಂದ್ಯಾಟ ವೀಕ್ಷಿಸಲು (ಗ್ಯಾಲರಿ) ವ್ಯವಸ್ಥೆ ಕಲ್ಪಿಸಲಾಗಿದೆ. ಮೈದಾನ ಸಮತಟ್ಟು, ವೇದಿಕೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಗಲಿರುಳೆನ್ನದೆ ಮಾಡುತ್ತಿದ್ದಾರೆ. ಜೀವನದ ಉದ್ದಕ್ಕೂ ನೆನಪಿಸುವಂತೆ ಸುಮಾರು 5 ಅಡಿ ಎತ್ತರದ ಆಕರ್ಷಕ ಟ್ರೋಫಿಗಳನ್ನು ಬಹುಮಾನವಾಗಿ ನೀಡಲಾಗುವುದು.
ಉದ್ಘಾಟನೆ ಸಮಾರಂಭ
ಕೇಂದ್ರದ ಯುವ ವ್ಯವಹಾರ ಮತ್ತು ಕ್ರೀಡಾ, ಮಾಹಿತಿ ತಂತ್ರಜ್ಞಾನ ಹಾಗೂ ಪ್ರಸಾರ ಇಲಾಖೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಅಟಲ್ ಟ್ರೋಫಿಯನ್ನು ಉದ್ಘಾಟಿಸುವರು. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.