Advertisement

Udupi: ಈಜಲು ತೆರಳಿದ್ದ ಓರ್ವ ವಿದ್ಯಾರ್ಥಿ ಸಾವು

12:53 AM Aug 26, 2024 | Team Udayavani |

ಉಡುಪಿ: ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರುಪಾಲಾದ ಘಟನೆ ಉಡುಪಿಯ ಕರಂಬಳ್ಳಿಯಲ್ಲಿ ಸಂಭವಿಸಿದೆ. ಇಂದ್ರಾಳಿ ನಿವಾಸಿ ಸಿದ್ದಾರ್ಥ್ ಶೆಟ್ಟಿ (17) ಮೃತಪಟ್ಟವರಾಗಿದ್ದು, ಇವರು ಮಣಿಪಾಲದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

Advertisement

ಸಿದ್ದಾರ್ಥ್ ಹಾಗೂ ಇತರ ಇಬ್ಬರು ಕರಂಬಳ್ಳಿಯ ಕೆರೆಗೆ ಈಜಲು ತೆರಳಿದ್ದು, ಈ ಪೈಕಿ ಇಬ್ಬರು ನೀರಿಗಿಳಿದಿರಲಿಲ್ಲ ಎಂದು ಹೇಳಲಾಗಿದೆ.

ಅಲೆವೂರಿನಲ್ಲಿ
ಮತ್ತೊಂದು ಘಟನೆಯಲ್ಲಿ ಅಲೆವೂರಿನ ನೈಲಪಾದೆಯ ನದಿಯಲ್ಲಿ ನಾಲ್ವರು ಈಜಾಡಲು ತೆರಳಿದ್ದು, ಇಬ್ಬರು ನದಿಗೆ ಇಳಿದಿದ್ದರು. ಇವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ನೀರುಪಾಲಾಗಿದ್ದು, ಸ್ಥಳೀಯರು ಕೂಡಲೇ ಅವರನ್ನು ಮೇಲೆತ್ತಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ರವಿವಾರ ರಜಾದಿನವಾದ್ದರಿಂದ ವಿದ್ಯಾರ್ಥಿಗಳು ಮೋಜಿಗಾಗಿ ನೀರಿನಾಟದಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next