Advertisement

“ಕಳೆದ ವರ್ಷವೇ ಉದ್ಧವ್‌ ಸಿಎಂ ಸ್ಥಾನ ಬಿಡಲು ಸಿದ್ಧರಿದ್ದರು: ದೀಪಕ್‌ ಕೆಸರ್ಕರ್‌

08:03 PM Aug 05, 2022 | Team Udayavani |

ಮುಂಬೈ: “ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆಯ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರು ಕಳೆದ ವರ್ಷ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಸಿದ್ಧರಾಗಿದ್ದರು’ ಎಂದು ಶಿವಸೇನೆಯ ಬಂಡಾಯ ನಾಯಕ ದೀಪಕ್‌ ಕೆಸರ್ಕರ್‌ ತಿಳಿಸಿದ್ದಾರೆ.

Advertisement

ಉದ್ಧವ್‌ ಠಾಕ್ರೆ ಅವರಿಗೆ ಅವರ ಸ್ಥಾನಕ್ಕಿಂತ ಪ್ರಧಾನಿ ಮೋದಿ ಅವರೊಂದಿಗಿನ ಸಂಬಂಧ ಮುಖ್ಯವಾಗಿತ್ತು. ಹಾಗಾಗಿ ಅವರು ರಾಜೀನಾಮೆಗೆ ಸಿದ್ಧರಿದ್ದರು. ಆದರೆ ಪಕ್ಷದಲ್ಲಿದ್ದ ನಾಯಕರಿಗೆ ಅದನ್ನು ಮನವರಿಕೆ ಮಾಡಿಕೊಡಲು ಕಷ್ಟವಾಗಿತ್ತು ಎಂದು ದೀಪಕ್‌ ಹೇಳಿದ್ದಾರೆ.

ಈ ವಿಚಾರವಾಗಿ ಉದ್ಧವ್‌ ಠಾಕ್ರೆ ಬಣದ ನಾಯಕರು ಪ್ರತಿಕ್ರಿಯಿಸಿದ್ದು, “ದೀಪಕ್‌ ಅವರು ವ್ಯತಿರಿಕ್ತ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರು ಗೊಂದಲದಲ್ಲಿದ್ದಾರೆ’ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next