Advertisement

ಮೋದಿ ಸರಕಾರದ ವಿರುದ್ಧ ಮತ್ತೆ ಗುಡುಗಿದ ಉದ್ಧವ್‌ ಠಾಕ್ರೆ

08:11 PM Nov 06, 2022 | Team Udayavani |

ಮುಂಬಯಿ: ಶಿವಸೇನೆ ಠಾಕ್ರೆ ಬಣದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮತ್ತೊಮ್ಮೆ ಮೋದಿ ಸರಕಾರವನ್ನು ಟಾರ್ಗೆಟ್‌ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಎರಡು ಲಕ್ಷ ಕೋಟಿ ರೂ.ಗಳ ಯೋಜನೆಗಳ ಘೋಷನೆ ಕುರಿತು ಮಾತನಾಡಿದ ಅವರು, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಘೋಷಣೆಗಳನ್ನು ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ.

Advertisement

ಬಾಂದ್ರಾ ಪೂರ್ವದ ಉತ್ತರ ಭಾರತೀಯ ಸಂಘದ ಸಭಾಂಗಣದಲ್ಲಿ ರವಿವಾರ ಮಾಜಿ ರಾಜ್ಯ ಸಚಿವ ಮತ್ತು ಮಾಜಿ ಸಂಸದ ರಮೇಶ್‌ ದುಬೆ ಅವರ ಆತ್ಮಚರಿತ್ರೆ “ಮೇರಿ ಅಮೃತ್‌ ಯಾತ್ರೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಹಾರಾಷ್ಟ್ರದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಚುನಾವಣೆ ಬಂದಾಗ ಮಾತ್ರ ಈ ಸರಕಾರ ಆ ರಾಜ್ಯದ ಬಗ್ಗೆ ಯೋಚಿಸುತ್ತದೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿಗಳು ನಡೆಯುತ್ತಿವೆ. ಇಲ್ಲಿಯವರೆಗೂ ಪ್ರಧಾನಿ ಮೋದಿಗೆ ಮಹಾರಾಷ್ಟ್ರದ ನೆನಪಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಪ್ರಧಾನಿಗೆ ಮಹಾರಾಷ್ಟ್ರದ ಮೇಲೆ ಪ್ರೀತಿ ಮೂಡಿದೆ. 2 ಲಕ್ಷ ಕೋಟಿ ರೂ.ಗಳ ಯೋಜನೆಗಳನ್ನು ಅಂದರೆ ಜಮೀನಿನ ಯೋಜನೆಗಳನ್ನು ಗುಜರಾತ್‌ಗೆ ಮತ್ತು ವಾಯು ಯೋಜನೆಗಳನ್ನು ಮಹಾರಾಷ್ಟ್ರಕ್ಕೆ ನೀಡಲಾಗಿದೆ. ಇವೇಲ್ಲಕ್ಕೂ ಮುನ್ನವೇ ಚುನಾವಣೆ ನಡೆಯಲಿದೆ ಎಂದು ನಾವು ಭವಿಷ್ಯ ನುಡಿದಿದ್ದೇವೆ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಬರುತ್ತಿದ್ದ ಕೈಗಾರಿಕೆಗಳು ಕೈತಪ್ಪಿದವು, ಇಲ್ಲದವುಗಳನ್ನು ಘೋಷಿಸಲಾಯಿತು. ಇದು ಚುನಾವಣೆ ಹತ್ತಿರದಲ್ಲಿದೆ ಎಂಬುದಾಗಿದೆ. ಹಾಗಾಗಿ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ನಿನ್ನೆ ಕಾರ್ಯಕರ್ತರಿಗೆ ಹೇಳಿದ್ದೆ. ನಾನು ಜ್ಯೋತಿಷಿಯಲ್ಲ. ಆದರೆ ಚುನಾವಣೆ ಬಂದಾಗ ಘೋಷಣೆಗಳು ಶುರುವಾಗುತ್ತವೆ. ಹೀಗಾಗಿ ರಾಜ್ಯದಲ್ಲಿಯೂ ಮಧ್ಯಂತರ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next