Advertisement

ಸಂಜಯ್‌ ರಾವತ್‌ ಭೇಟಿಗೆ ಉದ್ಧವ್‌ ಠಾಕ್ರೆಗಿಲ್ಲ ಅನುಮತಿ

08:51 PM Sep 07, 2022 | Team Udayavani |

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಶಿವಸೇನೆ ಸಂಸದ ಸಂಜಯ್‌ ರಾವತ್‌ ಅವರನ್ನು ಭೇಟಿಯಾಗಲು ಮಾಜಿ ಸಿಎಂ ಉದ್ಧವ್‌ ಠಾಕ್ರೆ ಅವರಿಗೆ ಅರ್ಥರ್‌ ಜೈಲಧಿಕಾರಿಗಳು ಅನುಮತಿ ನೀಡಿಲ್ಲ.

Advertisement

ರಾವತ್‌ ಅವರನ್ನು ಭೇಟಿಯಾಗಲು ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಜೈಲಿನ ಅಧಿಕಾರಿಗಳು ಮಾಜಿ ಸಿಎಂಗೆ ಮನವರಿಕೆ ಮಾಡಿದ್ದಾರೆ.

ಇತ್ತೀಚೆಗೆ ಉದ್ಧವ್‌ ಅವರ ಬೆಂಬಲಿಗರೊಬ್ಬರು ಜೈಲಧಿಕಾರಿಗಳಿಗೆ ಪೋನ್‌ ಮಾಡಿ ಮಾಜಿ ಸಿಎಂಗೆ ಸಂಜಯ ರಾವತ್‌ ಜತೆ ಭೇಟಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next