Advertisement

ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ

06:32 PM Sep 08, 2021 | Shreeraj Acharya |

ಚಿಕ್ಕಮಗಳೂರು : ವಿಘ್ನವಿನಾಶಕ ಮನೆ- ಮನೆಯಲ್ಲಿ ಪ್ರತಿಷ್ಠಾಪನೆಗೊಳ್ಳಲು ಕೆಲವೇ ದಿನಗಳು ಬಾಕಿ ಇದ್ದು ಜಿಲ್ಲಾದ್ಯಂತ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ. ಗಣೇಶ ಮೂರ್ತಿಗಳಿಗೆ ಅಂತಿಮ ಟಚ್‌ ನೀಡುವ ಕಾರ್ಯವೂ ಕಲಾವಿದರಿಂದ ನಡೆಯುತ್ತಿದೆ.

Advertisement

ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುತ್ತದೋ ಇಲ್ಲವೋ ಎಂಬ ಭಯ ಎಲ್ಲರನ್ನೂ ಕಾಡುತ್ತಿತ್ತು. ಹಬ್ಬ ಸಮೀಪಿಸುತ್ತಿದ್ದಂತೆ ಸರ್ಕಾರ ನಿರ್ಬಂಧಗಳನ್ನು ವಿಧಿಸಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿರುವುದರಿಂದ ಈ ವರ್ಷ ಗಣಪತಿ ಮೂರ್ತಿಗೆ ಬೇಡಿಕೆ ಕುಸಿಯಲು ಕಾರಣವಾಗಿದೆ.

ಸರ್ಕಾರ ನಿರ್ಬಂಧಗಳನ್ನು ವಿಧಿಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದ ಬಳಿಕ ಬೇಡಿಕೆ ಬರುತ್ತಿದ್ದು ಗಣೇಶ ಮೂರ್ತಿಗಳನ್ನು ಬೇಡಿಕೆ ತಕ್ಕಷ್ಟು ಸಿದ್ಧಪಡಿಸಿ ನೀಡಲು ಕಲಾವಿದರಿಗೆ ಸಾಧ್ಯವಾಗುತ್ತಿಲ್ಲ. ಹಂಸ, ಮಯೂರಿ, ಸುಬ್ರಹ್ಮಣ್ಯ, ಅಂಬಾರಿ, ಬಾಲಗಣಪತಿ, ವಿಷ್ಣು, ದರ್ಬಾರ್‌ ಗಣಪತಿಗಳು ಸೇರಿದಂತೆ ವಿವಿಧ ಆಯಾಮಗಳಲ್ಲಿ ತಯಾರಾಗಿರುವ ಗಣೇಶ ಮೂರ್ತಿಗಳಿಗೆ ಅಂತಿಮ ಟಚ್‌ ನೀಡಲಾಗುತ್ತಿದೆ.

ಇದನ್ನೂ ಓದಿ : ಮೃತ ವ್ಯಕ್ತಿಯೇ ಎದ್ದು ಬಂದು ಆಸ್ತಿ ಮಾರಿದ :ಇಲ್ಲೊಂದು ವಿಚಿತ್ರ ಪ್ರಕರಣ

ಕೆಲವೇ ದಿನಗಳಲ್ಲಿ ಮನೆ- ಮನೆಗಳಲ್ಲಿ, ಬಡಾವಣೆ- ಬಡಾವಣೆಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿವೆ. ನಗರದ ಬೋಳ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಪೆಂಡಾಲ್‌ ನಲ್ಲಿ ಪ್ರತಿಷ್ಠಾಪನೆಗೆ 4 ಅಡಿಗಳ ಗಣೇಶ ಮೂರ್ತಿ ಸಿದ್ಧಗೊಂಡಿದೆ. ಇನ್ನೂ 1 ಅಡಿಯಿಂದ ಹಿಡಿದು 4 ಅಡಿಯವರೆಗಿನ ವಿವಿಧ ಗಣೇಶ ಮೂರ್ತಿಗಳನ್ನು ತಯಾರು ಮಾಡಲಾಗಿದೆ. 100 ರೂ. ನಿಂದ 15 ಸಾವಿರ ರೂ. ವರೆಗಿನ ಗಣೇಶ ಮೂರ್ತಿಗಳು ಸಿದ್ಧಗೊಂಡಿವೆ. ಹಿರಿಯ ಕಲಾವಿದ ಏಕಾಂತ ರಾಮು ಮತ್ತು ಅವರ ಪುತ್ರ ಚೇತನ್‌ ಕುಮಾರ್‌ ಕೈಯಲ್ಲಿ ನಾಣ್ಯದ ಗಣಪತಿ ರೂಪುಗೊಂಡಿದೆ. 60ನೇ ದಶಕ ಹಾಗೂ ಈಗಿನ 5 ರೂ. 10 ರೂ. ನಾಣ್ಯಗಳನ್ನು ಒಳಗೊಂಡ 2 ಕೆ. ಜಿ. ನಾಣ್ಯಗಳನ್ನು ಬಳಸಿಕೊಂಡು ಸುಂದರ ಗಣೇಶ ಮೂರ್ತಿಯನ್ನು ರೆಡಿ ಮಾಡಲಾಗಿದೆ. ಹಾಗೆಯೇ ಇಲ್ಲಿ ತಯಾರಾದ ಗಣೇಶ ಮೂರ್ತಿಗಳು ಮಂಗಳೂರಿನಲ್ಲಿ ಪ್ರತಿಷ್ಠಾಪನೆಗೆ ಈಗಾಗಲೇ ಕಳಿಸಿ ಕೊಡಲಾಗಿದೆ. ಕಲಾವಿದ ಚೇತನ್‌ ಕುಮಾರ್‌ ಮಾತನಾಡಿ, ಚಿಕ್ಕಮಗಳೂರು ನಗರದ ಸುತ್ತಮುತ್ತ ಹಳ್ಳು ವಳ್ಳಿ, ನಲ್ಲೂರು, ಕೋಟೆ, ಉದ್ದೇಬೋರನಹಳ್ಳಿ, ಹೊಸ ಕೋಟೆ ಭಾಗಗಳಿಗೆ ಗಣೇಶ ಮೂರ್ತಿ ಕಳಿಸಿಕೊಡಲಾಗುತ್ತಿದೆ ಎಂದರು.

Advertisement

100 ರೂ.ನಿಂದ 15ಸಾವಿರ ರೂ. ಬೆಲೆಯ ಗಣೇಶಮೂರ್ತಿಗಳನ್ನು ತಯಾರು ಮಾಡಲಾಗಿದೆ. ಕುಂಬಾರ ಬೀದಿಯಲ್ಲಿ 13 ಕುಟುಂಬಗಳು ಗಣಪತಿ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದು, ಏಕಾಂತ ರಾಮು, ಚೇತನ, ದಿನೇಶ್‌, ಸಣ್ಣಪ್ಪ, ರಾಜಣ್ಣ, ಪರ ಮೇಶ್ವರಪ್ಪ, ಸಿದ್ದೇಶ್‌, ಬಿ. ಎಸ್‌. ರೇಣುಕಾ, ಸಾಗರ್‌, ರಾಕೇಶ್‌, ದೇವರಾಜ್‌, ಸುಪ್ರಿತ್‌ ಅವರ ಕರದಲ್ಲಿ ಪರಿಸರ ಸ್ನೇಹಿ ಗಣಪತಿಗಳು ಸುಂದರವಾಗಿ ಮೂಡಿಬಂದಿವೆ ಎಂದರು.

ಸರ್ಕಾರ ಕೊನೆ ಘಳಿಗೆಯಲ್ಲಿ ಅನುಮತಿ ನೀಡಿದ್ದು ಈ ಬಾರೀ ಬೇಡಿಕೆ ಕುಸಿಯಲು ಕಾರಣವಾಗಿದೆ. ಕಳೆದ ವರ್ಷ 80-85 ಗಣಪತಿ ಮೂರ್ತಿಗಳನ್ನು ನಿರ್ಮಿಸಿದ್ದು ಈ ವರ್ಷ 100 ಗಣಪತಿ ಮೂರ್ತಿಗಳನ್ನು ಆರ್ಡರ್‌ ಪಡೆದುಕೊಳ್ಳಲಾಗಿದೆ. ಪ್ರತೀವರ್ಷ 100 ಗಣಪತಿ ತಯಾರಿಸಲಾಗುತ್ತಿತ್ತು. ಆದರೆ, ಕೋವಿಡ್‌ ನಿಂದ ಕಳೆದ ವರ್ಷ 40 ಗಣಪತಿ ಹಾಗೂ ಈ ವರ್ಷ 50 ಗಣಪತಿ ತಯಾರಿಸಲಾಗಿದೆ. ಸರ್ಕಾರ ಪರವಾನಗಿ ನೀಡೋದು ತಡಮಾಡಿದ್ದರಿಂದ ಆರ್ಡರ್‌ ಕೊಟ್ಟು ಗಣಪತಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಕುಂಬಾರ ಬೀದಿಯಲ್ಲಿ ಪ್ರತೀವರ್ಷ 2 ಸಾವಿರ ಗಣಪತಿ ಮೂರ್ತಿಗಳನ್ನು ತಯಾರು ಮಾಡಲಾಗುತ್ತಿತ್ತು ಆದರೆ, ಕೋವಿಡ್‌ ನಿಂದ ಕಳೆದ ವರ್ಷಗಳಿಂದ ಗಣೇಶ ಮೂರ್ತಿಗಳಿಗೆ ಬೇಡಿಕೆ ಕುಸಿದಿದೆ. ನಗರದ ಸುತ್ತಮುತ್ತಲ ಗ್ರಾಮೀಣಗಳಿಗೆ ಗಣಪತಿ ರೆಡಿ ಮಾಡಲಾಗಿದೆ. ಕೊನೇ ಘಳಿಗೆಯಲ್ಲಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಬರುತ್ತಿದೆ. ಈಗ ಮೂರ್ತಿ ತಯಾರಿಸಲು ಸಾಧ್ಯವಿಲ್ಲ ಎಂದು ಕಲಾವಿದ ದಿನೇಶ್‌ ಬೇಸರ ವ್ಯಕ್ತಪಡಿಸಿದರು.

ಕೋವಿಡ್‌ ಸೋಂಕಿನ ಹಿನ್ನಲೆಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಗಣಪತಿ ವಿಸರ್ಜನೆಗೆ ಅವಕಾಶ ಇಲ್ಲದಿರುವುದರಿಂದ ವಿಘ್ನೇಶ್ವರನಿಗೆ ಬೇಡಿಕೆ ಕುಸಿಯಲು ಪ್ರಮುಖ ಕಾರಣವಾಗಿದೆ. ಆದರೂ ಕಲಾವಿದರ ಕೈಯಲ್ಲಿ ಬಣ್ಣ- ಬಣ್ಣದ ವಿವಿಧ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೆ ರೆಡಿಯಾಗಿವೆ.

ಇದನ್ನೂ ಓದಿ : ಲಿಂಗಾಯತ ಮೀಸಲಾತಿ ಸಿಗದಿದ್ದರೆ ಮತ್ತೆ ಸತ್ಯಾಗ್ರಹ : ಬಸವ ಜಯಮೃತ್ಯುಂಜಯ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next