Advertisement

ಉದಯವಾಣಿ ಫಲಶ್ರುತಿ: ಅಗ್ರಹಾರ ಕೆರೆ ಏರಿಗೆ ಭೇಟಿ ನೀಡಿದ ಇಂಜಿನಿಯರ್‌ಗಳು

09:31 PM Jul 21, 2022 | Team Udayavani |

ಕೊರಟಗೆರೆ : ಪಟ್ಟಣದ ಜೆಟ್ಟಿ ಅಗ್ರಹಾರ ಕೆರೆ ಏರಿ ಬಿರುಕು ಬಂದಿದ್ದು, ಅದನ್ನು ಸರಿಪಡಿಸುವ ಗೋಜಿಗೆ ಯಾರು ಹೋಗಿಲ್ಲ. ಹಾಗೂ ಸಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂಬುದಾಗಿ ಕೆರೆ ಏರಿ ಬಿರುಕು ಬಿಟ್ಟಿದ್ದ ವರದಿಯನ್ನು ಉದಯವಾಣಿ ಪತ್ರಿಕೆ ವರದಿ ಮಾಡಿ ಬಿತ್ತರಿಸಿತ್ತು.

Advertisement

ಪತ್ರಿಕೆಯಲ್ಲಿ ಸುದ್ದಿಯು ಪ್ರಸಾರವಾದ ಕೂಡಲೇ ಎಚ್ಚೆತ್ತ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಇಂದು ಕೆರೆ ಏರಿಗೆ ಬಂದು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.

ಕೆರೆ ಏರಿ ಒಡೆಯುವ ಆತಂಕದಲ್ಲಿದ್ದ ಗ್ರಾಮಸ್ಥರಿಗೆ ನೆಮ್ಮದಿಯಿಂದ ಇರುವಂತೆ ಉದಯವಾಣಿ ಪತ್ರಿಕೆ ಫಲಶ್ರುತಿಯನ್ನು ಕೊಟ್ಟಿದೆ.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆ ಏರಿ ಬಿರುಕು ಬಿಟ್ಟಿರುವುದು ಹಾಗೂ ಕೆರೆಯ ಸುತ್ತಲೂ ಬೆಳೆದಿರುವ ಗಿಡ ಮರಗಳನ್ನು ನೋಡಿದ್ದಾರೆ.

ಸಣ್ಣ ನೀರಾವರಿ ಇಲಾಖೆಯು ಕೆರೆ ಪುನಶ್ಚೇತನಕ್ಕೆ ೨೫ ಲಕ್ಷ ಹಣ ಬಿಡುಗಡೆ ಮಾಡಿರುತ್ತದೆ. ಹಾಗೂ ಇದಕ್ಕೆ ಸಂಬಂಧಿಸಿದಂತೆ 25 ಲಕ್ಷ ಟೆಂಡರ್ ಕರೆದಿರುವ ಅಧಿಕಾರಿಗಳು ಶೀಘ್ರದಲ್ಲೇ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇಂಜಿನಿಯರ್‌ಗಳು ಕೆರೆ ಹತ್ತಿರ ಬರುತ್ತಿದ್ದಂತೆ ಸ್ಥಳೀಯರು ಹಾಗೂ ರೈತರು ಆಕ್ರೋಶಭರಿತರಾಗಿದ್ದರು. ನಂತರ ಅಧಿಕಾರಿಗಳು ಅವರ ಮನವೊಲಿಸಿ ಶೀಘ್ರದಲ್ಲೇ ಸರಿಪಡಿಸುತ್ತೇವೆ ಎಂದು ಸಮಾಧಾನಪಡಿಸಿದರು.

ಅಗ್ರಹಾರದ ಸುರೇಂದ್ರಬಾಬು ಎಸ್. ಎಂಬುವವರು ಮಾತನಾಡಿ, ಅಗ್ರಹಾರದ ಕೆರೆ ಏರಿ ಬಿರುಕು ಬಿಟ್ಟಿರುವುದರ ಬಗ್ಗೆ ಉದಯವಾಣಿ ವರದಿ ಮಾಡಿತ್ತು. ಅದನ್ನು ನೋಡಿ ಎಚ್ಚೆತ್ತ ಅಧಿಕಾರಿಗಳು ಕೆರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೆರೆಯ ಅಭಿವೃದ್ಧಿ ಹಾಗು ಪುನಶ್ಚೇನಕ್ಕೆ 25 ಲಕ್ಷ ರೂ. ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಕಾರ್ಯಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಸರಿಪಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತೇವೆ. ಅಗ್ರಹಾರ ಕೆರೆಯ ಸಮಸ್ಯೆ ಹಾಗೂ ಅದರಿಂದ ಆಗುವ ಅನಾಹುತಗಳ ಬಗ್ಗೆ ವರದಿ ಬಿತ್ತರಿಸಿದ ಉದಯವಾಣಿ ಪತ್ರಿಕೆಗೆ ಅಭಿನಂದನೆಗಳನ್ನು ತಿಳಿಸುತ್ತೇವೆ ಎಂದರು.

Advertisement

ವರದಿ ಮಾಡಿ ಸುಮ್ಮನಿರುವುದಲ್ಲ ಉದಯವಾಣಿ ಪತ್ರಿಕೆಯ ಕೆಲಸ, ವರದಿಗೆ ತಕ್ಕ ಫಲಶ್ರುತಿಯನ್ನು ಕೊಡುವುದೇ ನಮ್ಮ ಮುಖ್ಯ ಉದ್ದೇಶ. ರೈತರಿಗೆ, ಸಾರ್ವಜನಿಕರಿಗೆ ಅನ್ಯಾಯ ನಡೆಯುತ್ತಿದ್ದರೂ ನೋಡಿ ಸುಮ್ಮನೆ ಕೂರುವುದಲ್ಲ ನಮ್ಮ ಸುದ್ದಿ ಪತ್ರಿಕೆ.

Advertisement

Udayavani is now on Telegram. Click here to join our channel and stay updated with the latest news.

Next