Advertisement

ಉದಯವಾಣಿ ವರದಿ ಫಲಶ್ರುತಿ: ತೀರ್ಥಹಳ್ಳಿ ಆಸ್ಪತ್ರೆ ಹೊರಾಂಗಣದಲ್ಲಿ ಬೆಳಕಿನ ಭಾಗ್ಯ

01:45 PM May 07, 2022 | Team Udayavani |

ತೀರ್ಥಹಳ್ಳಿ : ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಾದ ಜಯಚಾಮರಾಜೇಂದ್ರ ಆಸ್ಪತ್ರೆ ನೂರು ಹಾಸಿಗೆಯನ್ನು ಹೊಂದಿ ಮೇಲ್ದರ್ಜೆಗೇರಿದರು ಕೂಡ ಆಸ್ಪತ್ರೆಯ ಮುಖ್ಯ ಪ್ರವೇಶ ದ್ವಾರ ಹಾಗೂ ಹೊರಾಂಗಣದ ಆಸ್ಪತ್ರೆಯ ಸುತ್ತಮುತ್ತ ಹೊರ ಭಾಗದಲ್ಲಿ ವಿದ್ಯುತ್ ದೀಪಗಳು ಸರಿಯಿಲ್ಲದೆ ರಾತ್ರಿಯ ಸಮಯದಲ್ಲಿ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಗೆ ಬರುವ ರೋಗಿಗಳು ಕಳೆದ ಒಂದು ತಿಂಗಳಿನಿಂದ ನಿತ್ಯ ಪರದಾಡಬೇಕಿದೆ ಎಂಬ ವರದಿಯನ್ನು ಎರಡು ದಿನಗಳ ಹಿಂದೆ ಉದಯವಾಣಿ ಪತ್ರಿಕೆ ಫೋಟೋ ಸಮೇತ ವರದಿ ಮಾಡಿತ್ತು.

Advertisement

ವರದಿಯಾದ 48 ಗಂಟೆಯೊಳಗೆ ಜಯಚಾಮರಾಜೇಂದ್ರ ಆಸ್ಪತ್ರೆ ಹೊರಾಂಗಣದಲ್ಲಿ ಬೆಳಕಿನ ಭಾಗ್ಯ ಬಂದಿದೆ. ಉದಯವಾಣಿ ಸುದ್ದಿ ವರದಿಯಿಂದಾಗಿ ಆಸ್ಪತ್ರೆ ಹೊರಾಂಗಣದಲ್ಲಿ ವಿದ್ಯುತ್ ದೀಪ ಅಳವಡಿಸಿದ್ದಕ್ಕೆ ಸಾರ್ವಜನಿಕರು ಉದಯವಾಣಿ ಮಾಧ್ಯಮ ಬಳಗಕ್ಕೆ ಧನ್ಯವಾದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next