Advertisement

ಉಡುಪಿಯ ಇಬ್ಬರು ಮಹಿಳಾ ಯಾತ್ರಿಕರ ಕೊನೆಯುಸಿರು; ಮೆಕ್ಕಾದಲ್ಲೇ ಅಂತ್ಯಕ್ರಿಯೆ

04:18 PM Mar 12, 2023 | Team Udayavani |

ಉಡುಪಿ : ಉಮ್ರಾ ಯಾತ್ರೆ ವೇಳೆ ಅನಾರೋಗ್ಯದಿಂದ ನಿಧನ ಹೊಂದಿದ ಉಡುಪಿ ಜಿಲ್ಲೆಯ ಇಬ್ಬರು ಮಹಿಳಾ ಯಾತ್ರಾರ್ಥಿಗಳ ಅಂತಿಮ ವಿಧಿಗಳನ್ನು ಮೆಕ್ಕಾದಲ್ಲೇ ಮಾಡಲಾಯಿತು.

Advertisement

ಬ್ರಹ್ಮಾವರದ ಮಧುವನ ಅಚ್ಲಾಡಿ ನಿವಾಸಿಗಳಾದ ಮರಿಯಮ್ಮ (66) ಮತ್ತು ಅವರ ಸಂಬಂಧಿ ಖತೀಜಮ್ಮ (68) ಅವರು 23 ಮಹಿಳೆಯರು ಮತ್ತು 11 ಪುರುಷರನ್ನು ಒಳಗೊಂಡ ತಂಡದ ಭಾಗವಾಗಿ ಯಾತ್ರೆಗೆ ತೆರಳಿದ್ದರು, ಅವರು ಮಂಗಳೂರಿನಿಂದ ಟ್ರಾವೆಲ್ ಏಜೆನ್ಸಿಯ ಮೂಲಕ ತೆರಳಿದ್ದರು. ದುರಂತ ಸಂಭವಿಸುವ ಮೊದಲು ತಂಡ ಪವಿತ್ರ ಉಮ್ರಾ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.

ಮಾರ್ಚ್ 9 ರಂದು ಮದೀನಾಗೆ ಪ್ರಯಾಣಿಸಲು ಸಿದ್ಧತೆ ನಡೆಸುತ್ತಿದ್ದಾಗ ಮರಿಯಮ್ಮ ಹೃದಯಾಘಾತದಿಂದ ಕೊನೆಯುಸಿರೆಳೆದರು. ಖತೀಜಮ್ಮ ಕೂಡ ಅನಾರೋಗ್ಯದಿಂದ ಮಾರ್ಚ್ 11 ರಂದು ನಿಧನ ಹೊಂದಿದರು.

Advertisement

Udayavani is now on Telegram. Click here to join our channel and stay updated with the latest news.

Next