Advertisement

ಬೀದರ್‌:ವಾಕಿಂಗ್‌ಗೆ ಬಂದ ಮಹಿಳೆಯರಿಬ್ಬರ ಬರ್ಬರ ಹತ್ಯೆ 

10:17 AM Dec 02, 2018 | Team Udayavani |

ಬೀದರ್‌: ಇಲ್ಲಿನ ಶಾಹಗಂಜ್‌ ಪ್ರದೇಶದಲ್ಲಿ  ನಸುಕಿನ ವೇಳೆ ವಾಯುವಿಹಾರಕ್ಕೆಂದು ಬಂದಿದ್ದ ಇಬ್ಬರು ಮಹಿಳೆಯರನ್ನು ಮಾನಸಿಕ ಅಸ್ವಸ್ಥ ಎನ್ನಲಾದ ವ್ಯಕ್ತಿಯೊಬ್ಬ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಭಾನುವಾರ ನಡೆದಿದೆ. ಹತ್ಯೆಗೈದಿರುವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಲಲಿತಮ್ಮ ಮತ್ತು ದುರ್ಗಮ್ಮ ಎನ್ನುವ ಮಧ್ಯವಯಸ್ಕ ಮಹಿಳೆಯರಿಬ್ಬರನ್ನು ಹನುಮಾನ್‌ ಮಂದಿರದ ಬಳಿ ಬೆಳಗಿನ ಜಾವ ಬರ್ಬರವಾಗಿ ಹತ್ಯೆಗೈಯಲಾಗಿದೆ.

ಹತ್ಯೆ ಮಾಡಿರುವ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದು, ಮಾರ್ಕೆಟ್‌ ಠಾಣೆ ಪೊಲೀಸರು ಆತನ ವಿಚಾರಣೆ ತೀವ್ರಗೊಳಿಸಿದ್ದಾರೆ.

ಪೂರ್ವ ದ್ವೇಷದಿಂದ ಹತ್ಯೆಗೈದಿದ್ದಾನೆಯೋ, ಚಿನ್ನಾಭರಣಕ್ಕಾಗಿ ಹತ್ಯೆಗೈದಿದ್ದಾನೆಯೋ ಇನ್ನಷ್ಟೇ ತಿಳಿದು ಬರಬೇಕಿದೆ. 

ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next