Advertisement

ಅಪ್ರಾಪ್ತ ಬಾಲಕನಿಂದ ದ್ವಿಚಕ್ರ ವಾಹನ ಅಪಘಾತ: 30 ಸಾವಿರ ರೂ. ದಂಡ

09:04 PM Feb 09, 2024 | Team Udayavani |

ಕಾರವಾರ : ಅಪ್ರಾಪ್ತ ವಯಸ್ಕ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿ, ಪಾದಚಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ ಪ್ರಕರಣದಲ್ಲಿ ವಾಹನ ಮಾಲಕರಿಗೆ 30 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ಕಾರವಾರ ಹಿರಿಯ ಸಿವಿಲ್ ಹಾಗೂ ಸಿಜೆಎಂ ನ್ಯಾಯಾಧೀಶೆ ರೇಶ್ಮಾ ರೋಡ್ರಿಗಸ್ ಆದೇಶ ಹೊರಡಿಸಿದರು.

Advertisement

ಕಾರವಾರದ ಮುರುಳೀಧರ ಮಠ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡುವ ಅಪಘಾತ ಮಾಡಿದ್ದ. ಅಪ್ರಾಪ್ತ ನಾದ ಕಾರಣ ಬಾಲ ನ್ಯಾಯಾಮಂಡಳಿಗೆ ಈ ಪ್ರಕರಣ ವರ್ಗಾವಣೆ ಅಗಿತ್ತು. ಬಾಲಕನಿಗೆ 6500 ರೂ. ದಂಡ ಹಾಕಲಾಗಿದೆ. ದ್ವಿಚಕ್ರ ವಾಹನ ಆರ್ .ಸಿ. ಬುಕ್ ಹೊಂದಿದವರಿಗೆ ರೂ. 30,000 ದಂಡ ವಿಧಿಸಲಾಗಿದೆ ಎಂದು ನಗರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ ಐ ದೇವೇಂದ್ರ ನಾಯ್ಕ. ಎಂ. ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next