Advertisement

Shivamogga ಮೀನು ಹಿಡಿಯಲು ಹೋದ ವಿದ್ಯಾರ್ಥಿಗಳಿಬ್ಬರು ನೀರುಪಾಲು

12:42 AM Sep 21, 2023 | Shreeram Nayak |

ಶಿವಮೊಗ್ಗ: ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಕುರುಬರ ಪಾಳ್ಯದಲ್ಲಿ ನಡೆದಿದೆ.

Advertisement

ಸವಾಯಿ ಪಾಳ್ಯದ ಮೋಯಿನ್‌ ಖಾನ್‌ (19) ಮತ್ತು ಇಲಿಯಾಸ್‌ ನಗರದ ಅಂಜುಮ್‌ ಖಾನ್‌ (19) ಮೃತಪಟ್ಟಿದ್ದು ಇಬ್ಬರ ಶವ ಪತ್ತೆಯಾಗಿದೆ. ಇವರಿಬ್ಬರು ಸೋಮವಾರ ಮೀನು ಹಿಡಿಯಲು ಹೋದಾಗ ನದಿಯಲ್ಲಿ ಬಿದ್ದಿದ್ದು ಮೋಯಿನ್‌ ಖಾನ್‌ ಮೃತದೇಹ ಪತ್ತೆಯಾಗಿತ್ತು.

ಅಂಜುಮ್‌ಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ನಿರಂತರ ಹುಡುಕಾಟದ ಬಳಿಕ ನೀರಿಗೆ ಬಿದ್ದ ಜಾಗದಿಂದ 200 ಮೀ. ದೂರದಲ್ಲಿ ಶವ ಸಿಕ್ಕಿದೆ.

ನೀರಿಗೆ ಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬಂದಿ ಶೋಧ ಕಾರ್ಯಾಚರಣೆ ನಡೆಸಿದರು.

ಮೋಯಿನ್‌ ಖಾನ್‌ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿಸಿಎ ಓದುತ್ತಿದ್ದ. ಅಂಜುಂ ಖಾನ್‌ ಪ್ರಥಮ ಬಿಎ ಓದುತ್ತಿದ್ದ ಎಂದು ತಿಳಿದುಬಂದಿದೆ.

Advertisement

ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next