Advertisement

ನಾಲೆಯಲ್ಲಿ ಮುಳುಗಿ ಇಬ್ಬರು ಸಾವು 

06:45 AM Oct 29, 2017 | |

ಶಿವಮೊಗ್ಗ: ನೀರು ಕುಡಿಯಲು ನಾಲೆಗೆ ಇಳಿದಿದ್ದ ಕುರಿಗಾಹಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹೊಳಲೂರು ಸಮೀಪ ಶುಕ್ರವಾರ ಸಂಜೆ ಸಂಭವಿಸಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಹುಲವಳ್ಳಿ ಗ್ರಾಮದ ನರಸಪ್ಪ (15) ಹಾಗೂ ಚಿಕ್ಕೋಡಿ ತಾಲೂಕು ಮೊಳಕಿ ಗ್ರಾಮದ ಮುರಾರಿ (22) ಮೃತಪಟ್ಟವರು.

Advertisement

ಕುರಿ ಮೇಯಿಸಲು ಕುಟುಂಬ ಸದಸ್ಯರೊಂದಿಗೆ ಇಲ್ಲಿಗೆ ಆಗಮಿಸಿದ್ದ ಇವರಿಬ್ಬರೂ ಬಾಯಾರಿಕೆಯಾಗಿದ್ದರಿಂದ ಹತ್ತಿರದಲ್ಲೇ ಹರಿಯುತ್ತಿದ್ದ ತುಂಗಾ ನಾಲೆಗೆ ನೀರು ಕುಡಿಯಲು ತೆರಳಿದ್ದಾರೆ. ಈ ವೇಳೆ ನರಸಪ್ಪ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ನರಸಪ್ಪನನ್ನು ರಕ್ಷಿಸಲೆಂದು ಮುರಾರಿ ನಾಲೆಗೆ ಇಳಿದಿದ್ದಾರೆ. ಆದರೆ ಹರಿಯುತ್ತಿದ್ದ ನೀರಿನಲ್ಲಿ ಇವರೂ ಸಹ ಮುಳುಗತೊಡಗಿದಾಗ
ದಡದಲ್ಲಿದ್ದ ಇನ್ನಿಬ್ಬರು ಕೂಡಲೆ ರಕ್ಷಣೆಗೆ ಮುಂದಾದರಾದರೂ ಯಾವುದೇ ಪ್ರಯೋಜನವಾಗಿಲ್ಲ.

ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಶವಗಳ ಹುಡುಕಾಟ ನಡೆಸಿದರಾದರೂ
ಪ್ರಯೋಜವಾಗಿರಲಿಲ್ಲ. ಕತ್ತಲು ಆವರಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಶನಿವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನುಹೊರತೆಗೆಯಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next