Advertisement

ಉಡುಪಿ: ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ಹಲ್ಲೆ ನಡೆಸಿದ ಯುವತಿಯರು

01:09 PM Apr 23, 2021 | Team Udayavani |

ಉಡುಪಿ: ನಗರಸಭೆ ವ್ಯಾಪ್ತಿಯ ಸ್ವಚ್ಛತಾ ಕಾರ್ಮಿಕರೊಬ್ಬರ ಮೇಲೆ ಇಬ್ಬರು ಯುವತಿಯರು ಸೇರಿದಂತೆ ಮೂವರು ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸುರೇಶ್‌ (32) ಹಲ್ಲೆಗೊಳ್ಳಗಾದ ಸ್ವಸಹಾಯ ಗುಂಪಿನ ಸ್ವತ್ಛತಾ ಕಾರ್ಮಿಕ.

ಇದನ್ನೂ ಓದಿ:ಹಂಪನಕಟ್ಟೆ ಎಂಸಿಸಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ಇವರು ಸಹಾಯಕ ಮಂಜು ಅವರೊಂದಿಗೆ ಜನಾರ್ದನ ಹೈಟ್ಸ್‌ ಕಟ್ಟಡದ ಸಮೀಪ ಕಸ ವಿಲೇವಾರಿ ವಾಹನದ ಮೂಲಕ ತೆರಳುತ್ತಿದ್ದರು. ಆ ಸಂದರ್ಭ ಹಿಂದಿನಿಂದ ಬಂದ ಒಬ್ಬ ಯುವಕ ಹಾಗೂ ಇಬ್ಬರು ಯುವತಿಯರು ಸುರೇಶ್‌ ಅವರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ, ಕೈಯಿಂದ ಹಲ್ಲೆ  ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಕೋವಿಡ್ ಪಾಸಿಟಿವ್

Advertisement
Advertisement

Udayavani is now on Telegram. Click here to join our channel and stay updated with the latest news.

Next