Advertisement

ಕೃಷಿಹೊಂಡದ ನೀರಿನಲ್ಲಿ ಮುಳುಗಿ ನಾಲ್ಕು ವರ್ಷ ಪ್ರಾಯದ ಇಬ್ಬರು ಮಕ್ಕಳ ಸಾವು

03:22 PM Feb 12, 2021 | keerthan |

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳಿಯೊಂದರ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ದುರಂತ ಸಾವಿಗೀಡಾದ ಘಟನೆ ನಡೆದಿದೆ.

Advertisement

ಕೊಲ್ಹಾರ ತಾಲೂಕಿನ ಚಿಕ್ಕಆಸಂಗಿ ಗ್ರಾಮದ ಜಮೀನಿನಲ್ಲಿ ಗುರುವಾರ ಸಂಜೆ ದುರಂತ ನಡೆದಿದ್ದು, ಶುಕ್ರವಾರ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಾಸಂಗಿ ಗ್ರಾಮದ ಸಿದ್ದಲಿಂಗಪ್ಪ ಶಿವಪ್ಪ ಬೆಣ್ಣೂರ ಎಂಬ ರೈತ ಕೃಷಿ ಚಟುವಟಿಕೆಗಾಗಿ ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದ್ದರು.

ಇದನ್ನೂ ಓದಿ:ಮುಂದಿನ ಟಾರ್ಗೆಟ್ ಗೋಕಾಕ, ಪಕ್ಷ ಬಯಸಿದರೆ ಅಲ್ಲಿಂದಲೇ ಸ್ಪರ್ಧೆ: ಲಕ್ಷ್ಮೀ ಹೆಬ್ಬಾಳಕರ್

ಸದರಿ‌ ಕೃಷಿ ಹೊಂಡದ ಬಳಿಗೆ ಗುರುವಾರ ಸಂಜೆ ಆಟ ಆಡಲು ಬಂದ ಸಿದ್ದಲಿಂಗಪ್ಪ ಇವರ ಸಂಬಂಧಿಕರ ಮಕ್ಕಳಾದ ಆಕಾಶ ಮಹಾದೇವ ಬೆನ್ನೂರ (4) ಬೋರಮ್ಮ ಸಂಗಣ್ಣ ಬೆನ್ನೂರ (4) ಇವರು ನೀರು ಕುಡಿಯಲು ಕೃಷಿ ಹೊಂಡಕ್ಕೆ ಇಳಿದಿದ್ದಾರೆ‌. ಆಗ ಕಾಲು ಜಾರಿ ನೀರಿನಲ್ಲಿ ಬಿದ್ದು ಇಬ್ಬರೂ ಮಕ್ಕಳು ಮೃತಪಟ್ಟಿದ್ದಾರೆ.

Advertisement

ಸುದ್ದಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಧಾವಿಸಿದ ಬಸವನಬಾಗೇವಾಡಿ ಡಿಎಸ್ಪಿ ಅರುಣಕುಮಾರ ಕೋಳೂರ, ಕೊಲ್ಹಾರ ಪಿಎಸ್ಐ ಸಿದ್ದು ಯಡಹಳ್ಳಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next