Advertisement

ಹಿರಿಯಡಕದ ಪುತ್ತಿಗೆ ಬಳಿ ಸರಣಿ ಅಪಘಾತ:ಬೈಕ್‌ ಸವಾರರಿಬ್ಬರು ಬಲಿ

03:34 PM Mar 16, 2018 | Team Udayavani |

ಉಡುಪಿ: ಹಿರಿಯಡಕದ ಪುತ್ತಿಗೆ ಸಮೀಪ ರಾಜ್ಯ ಹೆದ್ದಾರಿಯಲ್ಲಿ  ಶುಕ್ರವಾರ ಮಧ್ಯಾಹ್ನ ಸರಣಿ ಅಪಘಾತ ಸಂಭವಿಸಿದ್ದು ಬೈಕ್‌ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

ರಸ್ತೆಯಲ್ಲಿ ಮರದ ಗೆಲ್ಲೊಂದು ಬಿದ್ದಿದ್ದ ಕಾರಣ ಕಾರನ್ನು ನಿಲ್ಲಿಸಲಾಗಿತ್ತು, ಈ ವೇಳೆ ಕಾರನ್ನು ಓವರ್‌ಟೇಕ್‌ ಮಾಡಿ ಬೈಕ್‌ ಮುಂದಕ್ಕೆ ಬಂದಿದ್ದು ಎದುರಿನಿಂದ ಬರುತ್ತಿದ್ದ ಲಾರಿ ಢಿಕ್ಕಿಯಾಗಿ ಪರಾರಿಯಾಗಿದೆ. ಬೈಕ್‌ ಸವಾರರಿಬ್ಬರೂ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ವೇಳೆ  ಶಿಮೊಗ್ಗಕ್ಕೆ ವೇಗವಾಗಿ ತೆರಳುತ್ತಿದ್ದ ಬಸ್‌ ರಸ್ತೆಗೆ ಬಿದ್ದಿದ್ದ ಸವಾರರ ಮೇಲೆ ಹರಿಯುವುದನ್ನು ತಪ್ಪಿಸಲು ಹೋಗಿ ಗದ್ದೆಗೆ ಪಲ್ಟಿಯಾಗಿದೆ.

ಬಸ್‌ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 

Advertisement

ಪರಾರಿಯಾದ ಲಾರಿಯನ್ನು ಪೆರ್ಡೂರಿನಲ್ಲಿ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ವರದಿಯಾಗಿದೆ. 

ಮೃತ ದುರ್ದೈವಿಗಳಿಬ್ಬರು ಪೆರ್ಡೂರಿನಲ್ಲಿ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಅಡುಗೆ ಬಡಿಸುವ ಕೆಲಸ ಮುಗಿಸಿ ವಾಪಾಸಾಗುತ್ತಿದ್ದರು ಎಂದು ತಿಳಿದು ಬಂದಿದ್ದು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. 

ಹಿರಿಯಡಕ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next