Advertisement

ಕಾರವಾರ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ‌ ಇಬ್ಬರ ಬಂಧನ

09:56 PM Apr 23, 2022 | Team Udayavani |

ಕಾರವಾರ: ನಗರದ ಬೀಚ್ ನಲ್ಲಿನ ಅಜ್ವಿ ಹೋಟೆಲ್ ಹಿಂಭಾಗದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ನಗರಠಾಣೆ ಪಿಎಸ್ ಐ ಸಂತೋಷ ಕುಮಾರ್ .ಎಂ. ಅವರ ತಂಡ ಬಂಧಿಸಿದೆ‌ .

Advertisement

ಶಿರವಾಡದ ಬಂಗಾರಪ್ಪ ನಗರ ನಿವಾಸಿ ರಾಜೇಶ್ .ಆರ್.ವಡ್ಡರ್ (27) , ಜಾಂಬಾ ನಿವಾಸಿ ಮಣಿಕಂಠ ಬಾಬು ರಾಠೋಡ್ (18) ಗಾಂಜಾ ಮಾರಾಟದಲ್ಲಿದ್ದಾಗ ಗಾಂಜಾ ಸಹಿತ ಬಂಧಿಸಲಾಗಿದೆ. ಶನಿವಾರ ಅಪರಾಹ್ನ 3.15 ರ ಸಮಯಕ್ಕೆ ಖಚಿತಮಾಹಿತಿ ಮೇರೆಗೆ ಈ ದಾಳಿ ನಡೆಯಿತು.

ಬಂಧಿತರಿಂದ 210 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. 10 ಸಾವಿರ ಮೊತ್ತದ ಗಾಂಜಾ ಹಾಗೂ ಯಮಹಾ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದು ಎನ್ ಡಿಪಿಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ. ಎಸ್ಪಿ ಸುಮನ್ ಪನ್ನೇಕರ್, ಅಡಿಶನಲ್ ಎಸ್ಪಿ ಬದರೀನಾಥ, ಡಿವೈಎಸ್ಪಿ ವೆಲೆಂಟೈನ್ ಡಿಸೋಸಾ, ಸಿಪಿಐ ಸಿದ್ದಪ್ಪ ಮಾರ್ಗದರ್ಶನ ನೀಡಿದ್ದರು. ಪೊಲೀಸ್ ಸಿಬ್ಬಂದಿ ರಾಜೇಶ್ , ಮಹೇಶ್ ನಾಯ್ಕ ,ರಾಘವೇಂದ್ರ ನಾಯ್ಕ, ಜಟ್ಟಿ ಎಂ.ನಾಯ್ಕ ,ಪಿಎಸ್ ಐ ಸಂತೋಷ ಅವರ ಜೊತೆ ದಾಳಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next