Advertisement

ಶಾಸಕರ ಕಛೇರಿಗೇ ಕನ್ನ: ಇಬ್ಬರ ಬಂಧನ

06:45 PM Feb 17, 2023 | Team Udayavani |

ನವದೆಹಲಿ: ಶಾಸಕರೊಬ್ಬರ ಕಛೇರಿಗೇ ಕನ್ನ ಹಾಕಿದ ಇಬ್ಬರನ್ನು ಪೋಲಿಸರು ಬಂಧಿಸಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

Advertisement

ಫೆ.10 ರಂದು ರಾತ್ರಿ ದೆಹಲಿಯ ವಿಶ್ವಾಸ್‌ ನಗರ ಕ್ಷೇತ್ರದ ಬಿಜೆಪಿ ಶಾಸಕ ಓಂ ಪ್ರಕಾಶ್‌ ಶರ್ಮಾ ಅವರ ಕರ್ಕರ್ದೂಮಾ ಕೋರ್ಟ್‌ ಬಳಿಯಲ್ಲಿರುವ ಕಛೇರಿಯ ಬೀಗ ಒಡೆದು ಕಳವು ಮಾಡಲಾಗಿತ್ತು.

ಕಛೇರಿ ಸುತ್ತಮುತ್ತಲಿನ ಪ್ರದೇಶದ ಸಿ.ಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಇಬ್ಬರು ವ್ಯಕ್ತಿಗಳ ಓಡಾಟ ಕಂಡುಬಂದಿದೆ. ಸಾಕ್ಷ್ಯಗಳ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಅದರಲ್ಲಿ ಒಬ್ಬ 21 ವರ್ಷದವನಾಗಿದ್ದು, ಮತ್ತೊಬ್ಬ ಬಾಲಾಪರಾಧಿ ಎಂದು ಹೇಳಲಾಗಿದೆ. ಆರೋಪಿಗಳಿಂದ ಐದು ನೀರಿನ ನಲ್ಲಿಗಳು, ನೀರಿನ ಮೋಟರ್‌ ಒಂದನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಅದಾನಿ-ಹಿಂಡೆನ್ ಬರ್ಗ್ ಪ್ರಕರಣ: ಮುಚ್ಚಿದ ಲಕೋಟೆ ಉತ್ತರ ಸ್ವೀಕರಿಸಲ್ಲ: ಕೇಂದ್ರಕ್ಕೆ ಸುಪ್ರೀಂ

Advertisement

Udayavani is now on Telegram. Click here to join our channel and stay updated with the latest news.

Next