Advertisement

ಶಿರಸಿ: ಸಾಮಾಜಿಕ ಜಾಲತಾಣದಲ್ಲಿ‌ ಕೋಮು ಸೌಹಾರ್ದತೆ ಕೆರಳಿಸುವ ಸ್ಟೇಟಸ್ : ಇಬ್ಬರ ಬಂಧನ

02:17 PM Oct 03, 2022 | Team Udayavani |

ಶಿರಸಿ: ಸಾಮಾಜಿಕ ಜಾಲತಾಣದಲ್ಲಿ‌ ಕೋಮು ಸೌಹಾರ್ದತೆ ಕೆರಳಿಸುವ ವಾಟ್ಸಪ್ ಸ್ಟೇಟಸ್ ಗಳನ್ನು ಹಾಕಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಶಿರಸಿ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.

Advertisement

ಮರಾಠಿಕೊಪ್ಪದ ನಿವಾಸಿಗಳಾದ, ಗೌಸ್ ಅಜಮ್ ಮಹ್ಮದ್,ಮೆಹಬೂಬ್ ಸಾಬ್ ಬಂಧಿತ ಆರೋಪಿಗಳು.

ಬಂಧಿತ ಇಬ್ಬರು ಆರೋಪಿಗಳು ಅನ್ಯ ಕೋಮಿನ ಜನರನ್ನು ಕೆರಳಿಸುವಂತೆ  ವಾಟ್ಸಪ್ ಸ್ಟೇಟಸ್ ಗಳನ್ನು ಹಾಕಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವಲ್ಲಿ ನಿರತರಾಗಿದ್ದರಿಂದ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಬಂಧಿಸಿದ್ದಾಗಿ ತಿಳಿಸಿದ್ದಾರೆ.

ತಹಸೀಲ್ದಾರರು ನ್ಯಾಯಾಂಗ ಬಂಧನ ವಿಧಿಸಿದ್ದು, ಪೊಲೀಸರ ತಂಡದಲ್ಲಿ ಡಿಎಸ್ ಪಿ ರವಿ ಡಿ. ನಾಯ್ಕ್, ಸಿಪಿಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಪಿಎಸ್ ಐ ಭೀಮಾಶಂಕರ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬೇಗ  ಪತ್ತೆ ಹಚ್ಚಿ, ಕಾನೂನು ಕ್ರಮ ಜರುಗಿಸಿ  ಕಟ್ಟೆಚ್ಚರ ವಹಿಸಿದ್ದಾರೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next