Advertisement

ದೆಹಲಿಯ ಸೀರಿಯಲ್ ನಟಿಗೆ ಕುಡುಕರಿಂದ ಕಿರುಕುಳ : ಆರೋಪಿಗಳು ಅಂದರ್

10:17 AM Feb 03, 2021 | Team Udayavani |

ನವ ದೆಹಲಿ : ದೆಹಲಿಯ ರೋಹಿಣಿಯ ರೆಸ್ಟೋರೆಂಟ್‌ ನಲ್ಲಿ ಕುಟುಂಬದವರೊಂದಿಗೆ ಸಹ ಭೋಜನ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ನಾಲ್ಕು ಕುಡುಕರಿಂದ ಕಿರುಕುಳ ನೀಡಿದ್ದಾರೆ ಎಂದು ಟಿವಿ ಸೀರಿಯಲ್ ನಟಿಯೊಬ್ಬರು ಆರೋಪಿಸಿದ್ದಾರೆ.

Advertisement

ಆದಿತ್ಯವಾರ  (ಜ. 31) ರ ರಾತ್ರಿ ಪತಿಯೊಂದಿಗೆ ಮನೆಗೆ ಹಿಂದಿರುಗುತ್ತಿದ್ದಾಗ, ನಮ್ಮ ಕಾರನ್ನು ನಾಲ್ಕು ಕುಡುಕರು ಬೆನ್ನಟ್ಟಿದ್ದಾರೆ ಎಂದು ನಟಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಓದಿ : ರೇಷ್ಮೆ ಜತೆ ದೀಪಾವಳಿ..! ಬಹುಮಾನ ವಿತರಣೆ ಕಾರ್ಯಕ್ರಮ

ಸೋಮವಾರ (ಫೆ. 1) ದಂದು ಮುಂಜಾನೆ 2 ಗಂಟೆ ಸುಮಾರಿಗೆ ತನ್ನ ಗಂಡನ ಮುಂದೆ ಕಿರುಕುಳ ನೀಡಲಾಯಿತು ಮತ್ತು ಅಮಾನುಷವಾಗಿ ನಿಂದಿಸಲಾಗಿದೆ ಎಂದು ದೂರಿನಲ್ಲಿ ನಟಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ, ಆ ಸೀರಿಯಲ್ ನಟಿಯ ದೂರಿನ ಆಧಾರದ ಮೇಲೆ ಪೊಲೀಸರು ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.  ದಾರಿಯಲ್ಲಿ ವ್ಯಾಗನರ್ ಕಾರಿನಲ್ಲಿದ್ದ ನಾಲ್ಕು ಹುಡುಗರು ತಮ್ಮ ಕಾರನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದ್ದರು. ನಾಲ್ವರು ಹುಡುಗರು ಅವರನ್ನು ಹಿಂಬಾಲಿಸಿದರು ಮತ್ತು ಕಾರಿನಿಂದ ಇಳಿದ ಕೂಡಲೇ ನಟಿಯನ್ನು ಕಿರುಕುಳ ನೀಡಲು ಮುಂದಾಗಿದ್ದರು ಎಂಬುವುದನ್ನು ಪೊಲೀಸ್ ಮೂಲಗಳು ತಿಳಿಸಿವೆ.

Advertisement

ನಟಿ ಅವರ ಪ್ರತಿವಿರುದ್ಧವಾಗಿ ನಡೆದುಕೊಂಡಾಗ ಅವಳನ್ನು  ಅವಾಚ್ಯ ಭಾಷೆಯಲ್ಲಿ ನಿಂದಿಸಿದ್ದಾರೆ. ಆ ನಾಲ್ಕು ಹುಡುಗರು ತನ್ನ ಫ್ಲ್ಯಾಟ್‌ ಗೆ ತಲುಪಿ ಬಾಗಿಲು ಬಡಿದಿದ್ದಾರೆ ಎಂದು ನಟಿ  ಪೊಲೀಸರಿಗೆ ತಿಳಿಸಿದ್ದಾರೆ. ನಟಿ ನೀಡಿದ ದೂರಿನನ್ವಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಕಾರ್ ನಂಬರನ್ನು ಸರ್ಚ್ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು, ಆರೋಪಿಗಳನ್ನು ಆಶಿಶ್ ಕಪೂರ್, ಚಿರಾಗ್, ಕಾಶಿಶ್ ಮದನ್ ಮತ್ತು ಅವರ ಸಹೋದರ ಎಂದು ಗುರುತಿಸಲಾಗಿದೆ.

ಓದಿ :ರಾಜ್ಯದಲ್ಲಿ ಹುಕ್ಕಾ ಬಾರ್‌ ನಿಷೇಧಕ್ಕೆ ಚಿಂತನೆ!

 

 

Advertisement

Udayavani is now on Telegram. Click here to join our channel and stay updated with the latest news.

Next