Advertisement

ನರ್ಸರಿ ಶಾಲೆಗಳಾಗಿ ಪರಿವರ್ತಿಸಿ

04:26 PM Jul 06, 2019 | Team Udayavani |

ಮದ್ದೂರು: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ತಾಲೂಕು ಕಚೇರಿ ಮುಂದೆ ಜಮಾಯಿಸಿದ ಅಂಗನವಾಡಿ ಕಾರ್ಯಕರ್ತೆ ಯರು ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿ ಕೈಗೊಂಡು ಶಿರಸ್ತೇದಾರ್‌ ಪ್ರಭಾಕರ್‌ ಅವರಿಗೆ ಮನವಿ ಪತ್ರ ಸಲ್ಲಿಸಿ, ಅಂಗನವಾಡಿ ಕೇಂದ್ರಗಳನ್ನು ಇಂಗ್ಲಿಷ್‌ ಕಾನ್ವೆಂಟ್ ಹಾಗೂ ನರ್ಸರಿ ಶಾಲೆಗಳಾಗಿ ಪರಿವರ್ತಿಸಬೇಕೆಂದು ಒತ್ತಾಯಿಸಿದರು.

2 ವರ್ಷ 6 ತಿಂಗಳ ಮಕ್ಕಳನ್ನು ಅಂಗನವಾಡಿ ನರ್ಸರಿ ಶಾಲೆಗೆ ಸೇರಿಸಿಕೊಳ್ಳಲು ಆದೇಶ ಹೊರಡಿಸಬೇಕು. ಮಕ್ಕಳಿಗೆ ಬೇಕಾಗಿರುವ ಪಠ್ಯ ಪುಸ್ತಕ, ಆಟಿಕೆ ಸಾಮಗ್ರಿ ಹಾಗೂ ಶೂ ಸಾಕ್ಸ್‌ ವಿತರಿಸಲು ಮುಂದಾಗಬೇಕು. ಸರ್ಕಾರಕ್ಕೆ ಸಂಪನ್ಮೂಲ ಉಳಿಯಬೇಕಾದಲ್ಲಿ ಎಲ್ಕೆಜಿ ಮತ್ತು ಯುಕೆಜಿ ನರ್ಸರಿ ಸ್ಕೂಲ್ಗಳನ್ನು ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವಿಸ್ತರಿಸುವ ಜತೆಗೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೋವಾ ಸರ್ಕಾರ ರೀತಿ ಸೇವಾವಧಿ ಆಧಾರದ ಮೇಲೆ ವೇತನ ನೀಡುವಂತೆ ಆಗ್ರಹಿಸಿದರು.

ಸಂಘಟನೆ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ, ತನುಜಾ, ಆನಂದಮ್ಮ, ಶೈಲಜಾ, ಶಿವಲಿಂಗಮ್ಮ, ಮಂಜುಳಾ, ಮೀನಾಕ್ಷಿ, ಕುಮುದಾ, ಸುಶೀಲಮ್ಮ, ಶೋಭಾ, ನಾಗಮ್ಮ, ಸುಮಿತ್ರ, ವರಲಕ್ಷ್ಮೀ, ಪದ್ಮಾಕ್ಷಿ, ನಾಗರತ್ನ, ಶಾರದಾ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next