Advertisement

Tungabhadra Dam: ಮೊದಲ ಬೆಳೆಗೆ ನೀರು ಸಿಗುವ ವಿಶ್ವಾಸವಿದೆ: ತಂಗಡಗಿ

02:22 PM Aug 11, 2024 | Team Udayavani |

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಗೇಟ್ ನ ಚೈನ್ ಲಿಂಕ್ ಕಟ್ಟಾಗಿದ್ದು, ಒಂದು ಲಕ್ಷ ಕ್ಯೂಸೆಕ್ ನೀರು ನದಿಪಾತ್ರಕ್ಕೆ ಹರಿಯುತ್ತಿದೆ. ಆದರೂ ಮೊದಲ ಬೆಳೆ ಬೆಳೆಯಲು ನೀರಿನ ಸಮಸ್ಯೆಯಾಗುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು‌.

Advertisement

ಜಲಾಶಯಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನಿನ್ನೆ ರಾತ್ರಿ 11.45 ಕ್ಕೆ ನನ್ನ ಗಮನಕ್ಕೆ ಬಂತು. ನಾನಾಗ ತೂಮಕೂರಿನಲ್ಲಿದ್ದೆ.  ಮೊದಲಿಗೆ ಅಲ್ಲಿಯೇ ರಾತ್ರಿಯಿದ್ದು, ಬೆಳಗ್ಗೆ ಬರಬೇಕು ಎಂದುಕೊಂಡಿದ್ದೆ, ಆದರೆ, ಘಟನೆ ಗೊತ್ತಾದ ತಕ್ಷಣ ಅಲ್ಲಿಂದ ಕೂಡಲೇ ರಾತ್ರಿಯೆ ಹೊರಟು 3-30 ಕ್ಕೆ ಜಲಾಶಯದ ಬಳಿ ಬಂದು ವಾಸ್ತವ ಪರಿಶೀಲಿಸಿದೆ. ಇಲ್ಲಿ ಬಂದು ನೋಡಿದಾಗ ಒಂದು ಕ್ಷಣ ನಾನೇ ಆತಂಕಗೊಂಡೆ ಜಲಾಶಯದ 19 ನೇ ಗೇಟ್ ನ ಚೈನ್ ಲಿಂಕ್ ಆಗಿದ್ದರಿಂದ ನೀರು ರಭಸವಾಗಿ ಹರಿಯುತಿತ್ತು.  ಗೇಟ್ ಗಳ ಮುಂಭಾಗದಲ್ಲಿ ನಿಲ್ಲಲು ಭಯವಾಗುತಿತ್ತು. ಕೂಡಲೇ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯ‌ನಗರ ಜಿಲ್ಲಾಡಳಿತದೊಂದಿಗೆ ಮಾತನಾಡಿ, ನದಿ ಪಾತ್ರದ ಗ್ರಾಮಗಳಲ್ಲಿ ಮಾಹಿತಿ ನೀಡಲಾಯಿತು ಎಂದರು.

ನಂತರ ಉಳಿದ ಗೇಟ್ ಗಳಲ್ಲಿ ನೀರು ಬಿಡುಗಡೆ ಮಾಡಿಸಿ, ಜಲಾಶಯದ ಒತ್ತಡ ಕಡಿಮೆ ಮಾಡಲಾಯಿತು. ಸದ್ಯ ಗೇಟ್ ಹೊಸದಾಗಿ ಹೊಸಪೇಟೆಯಲ್ಲಿ ಮಾಡಿಸಲಾಗುತ್ತಿದೆ ಎಂದರು.

ತಜ್ಞರ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಸ್ತುತ ಜಲಾಶಯದಲ್ಲಿರುವ ನೀರಿನ ಪೈಕಿ 60 ಟಿಎಂಸಿ ನೀರು ಹೊರಗಡೆ ಹರಿಯ ಬಿಟ್ಟು ಕಾಮಗಾರಿ ಶುರು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಡಿಸಿಎಂ ಅವರೊಂದಿಗೆ ಮಾತನಾಡಿದ್ದೇನೆ. ನನ್ನ ಅಂದಾಜಿನ ಪ್ರಕಾರ ರೈತರ ಮೊದಲ ಬೆಳೆಗೆ ನೀರಿನ ಸಮಸ್ಯೆಯಾಗುವುದಿಲ್ಲ. ರೈತರು ಎದೆಗುಂದಬೇಕಿಲ್ಲ. ಅಲ್ಲದೆ, ಜಲಾನಯನ ಪ್ರದೇಶದಲ್ಲಿ ಇನ್ನೂ ಮಳೆಯಿರುವುದರಿಂದ ಚಿಂತಿಸುವ ಅಗತ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next