Advertisement
ಉಡುಪಿ ಜಿಲ್ಲೆಯ, ಕಾಪು ತಾಲೂಕಿನ ಮಜೂರು ಗ್ರಾಮದ ಉಳಿಯಾರು ನಿವಾಸಿಯಾಗಿದ್ದ ಅವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಭಾಷೆ, ಜನಪದ, ಸಂಸ್ಕೃತಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ಡಾ| ಯು.ಪಿ. ಉಪಾಧ್ಯಾಯ ಅವರ ಪತ್ನಿ ಬಹುಭಾಷಾ ಸಂಶೋಧಕಿ ಡಾ| ಸುಶೀಲಾ ಉಪಾಧ್ಯಾಯ ಅವರು 2014ರಲ್ಲಿ ನಿಧನ ಹೊಂದಿದ್ದರು.
Related Articles
Advertisement
ಬಳಿಕ 1969ರಲ್ಲಿ ಮೈಸೂರಿನ ಭಾರತೀಯ ಭಾಷಾ ವಿಜ್ಞಾನದ ದಕ್ಷಿಣ ಭಾರತ ಭಾಷಾ ಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದು, 1973ರಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಭಾರತೀಯ ಸಾಂಸ್ಕೃತಿಕ ಸಂಬಂಧ ಪರಿಷತ್ ಮೂಲಕ ಪಶ್ಚಿಮ ಆಫ್ರಿಕಾದ ಸೆನೆಗಲ್ ರಾಷ್ಟ್ರದ ಡಕಾರ್ ವಿವಿಯಲ್ಲಿ ಇಂಡೋ ಆಫ್ರಿಕನ್ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕ ಜೊತೆಗೆ ಲಂಡನ್ ಪ್ಯಾರಿಸ್ ವಿಶ್ವವಿದ್ಯಾಲಯಗಳಲ್ಲಿಆರು ತಿಂಗಳುಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
1980ರಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ, ಸಂಶೋಧನಾ ಮಾರ್ಗದರ್ಶಕರಾಗಿ, ತುಳು ನಿಘಂಟಿನ ಪ್ರಧಾನ ಸಂಪಾದಕರಾಗಿದ್ದರು. 1998ರಲ್ಲಿ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರು ಇದರ ಉಡುಪಿ ಶಾಖೆಯಲ್ಲಿ ಸಿದ್ಧ ಯೋಗ ಶಿಕ್ಷಕರಾಗಿ, ಕೇಂದ್ರದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು2005ರಲ್ಲಿ ಮುಂಬಯಿಯಲ್ಲಿ ನಡೆದ ಭಾರತೀಯ ಸ್ಥಳನಾಮ ಪರಿಷತ್ನ ವಾರ್ಷಿಕ ಅಧ್ಯಯನದ ಅಧ್ಯಕ್ಷತೆ ವಹಿಸಿದ್ದರು.
ನಿರಂತರ ಮಾರ್ಗದರ್ಶಕರು: ಅಂತಾರಾಷ್ಟ್ರೀಯ ಭಾಷಾ ವಿಜ್ಞಾನಿ , ತುಳುನಿಘಂಟುಕಾರ, ರಾಷ್ಟ್ರಮಟ್ಟದ ಬಹು ಶ್ರುತ ವಿದ್ವಾಂಸರಾಗಿದ್ದ ಡಾ| ಯು.ಪಿ. ಉಪಾಧ್ಯಾಯ ಅವರ ಬಳಿಯಲ್ಲಿ ಪದ್ಮನಾಭ ಕೇಕುಣ್ಣಾಯ, ಸಂಗೀತಾ ಎಂ. ಕುಂಜೂರು ಲಕ್ಷ್ಮೀ ನಾರಾಯಣ ಕುಂಡಂತಾಯ, ಅರುಣ್ ಕುಮಾರ್ ಎಸ್.ಆರ್. ಮೊದಲಾದವರಿಗೆ ಸಂಶೋಧಕನಾ ಮಾರ್ಗದರ್ಶಕರಾಗಿದ್ದು, ಡಾ| ಎಂ. ಪ್ರಭಾಕರ ಜೋಷಿ, ಡಾ| ರಾಘವ ನಂಬಿಯಾರ್, ಡಾ| ಜನಾರ್ದನ ಭಟ್ ಮೊದಲಾದವರಿಗೆ ಪಿಎಚ್ಡಿ ಗೈಡ್ ಆಗಿದ್ದರು.
ಪ್ರಶಸ್ತಿ – ಪುರಸ್ಕಾರಗಳು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಪ್ರಶಸ್ತಿ, ಗುಂಡರ್ಟ್ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕಾರಂತ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಿಟ್ಟೆಲ್ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಅಂತಾರಾಷ್ಟ್ರೀಯ ನಿಘಂಟುಕಾರ ರಚನಾಕಾರರ ಸಮ್ಮೇಳನ ಪ್ರಶಸ್ತಿ, ದ್ರಾವಿಡ ಭಾಷಾ ವಿಜ್ಞಾನಿಗಳ ಸಮ್ಮೇಳನದ ಬಹುಮಾನ, ಕನ್ನಡ ಸಂಘದ ತ್ರಿದಶಮಾನೋತ್ಸವ ಪ್ರಶಸ್ತಿ, ಶ್ರೀ ರಾಮ ವಿಠಲ ಪ್ರಶಸ್ತಿ, ಸುವರ್ಣ ಕರ್ನಾಟಕ ದಿಬ್ಬಣ ಪ್ರಶಸ್ತಿ, ಶಂಭಾ ಜೋಷಿ ಪ್ರಶಸ್ತಿ, ಹುಟ್ಟೂರ ಸಮ್ಮಾನ ಸಹಿತವಾಗಿ ನೂರಾರು ಪ್ರಶಸ್ತಿ, ಪುರಸ್ಕಾರ ಮತ್ತು ಗೌರವ ಸಮ್ಮಾನಗಳು ದೊರಕಿದ್ದವು.