Advertisement

ತುಳು, ಕನ್ನಡ ಬೇರೆ ಬೇರೆ ಅಲ್ಲ: ಪುನೀತ್ ಸಂಸ್ಮರಣೆಯಲ್ಲಿ ಶಿವರಾಜ್ ಕುಮಾರ್

04:46 PM May 02, 2022 | Team Udayavani |

ಮಂಗಳೂರು : ಅಪ್ಪು ಹುಟ್ಟುವಾಗಲೇ ಸೂಪರ್ ಸ್ಟಾರ್ ಆಗಿದ್ದ, ದಿನ ಕಳೆದರೂ ನೋವು ಕಡಿಮೆಯಾಗುತ್ತಿಲ್ಲ. ಪುನೀತ್ ನೆನಪಲ್ಲಿ ಸಂಭ್ರಮಿಸೋಣ ಎಂದು ನಟ ಶಿವರಾಜ್ ಕುಮಾರ್ ಅವರು ತಮ್ಮನ ನೆನನಪಿನಲ್ಲಿ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಸೋಮವಾರ ಮಂಗಳೂರು ಪೊಲೀಸ್ ವತಿಯಿಂದ ಆಯೋಜಿಸಲಾದ ಪುನೀತ್ ರಾಜ್ ಕುಮಾರ್ ಸಂಸ್ಮರಣೆ ಕಾರ್ಯಕ್ರಮಲ್ಲಿ ಶಿವರಾಜ್ ಕುಮಾರ್ ಅವರು ಭಾಗಿಯಾಗಿ ಮಾತನಾಡಿದರು. ಪೊಲೀಸ್ ಸಿಬ್ಬಂದಿಗಳೊಂದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಪೊಲೀಸ್ ಆಯುಕ್ತ ಎನ್ . ಶಶಿಕುಮಾರ್ ಅವರ ಹಾಡಿಗೆ ಶಿವರಾಜ್ ಕುಮಾರ್ ಹೆಜ್ಜೆ ಹಾಕಿ ನೆರೆದಿದ್ದ ಪೊಲೀಸರನ್ನು ಸಂಭ್ರಮದಲ್ಲಿ ತೇಲಾಡಿಸಿದರು.

ತುಳು, ಕನ್ನಡ ಬೇರೆ ಬೇರೆ ಅಲ್ಲ. ಮಂಗಳೂರು ನನಗೆ ತುಂಬಾ ಇಷ್ಟದ ಊರು ಎಂದರು.

Advertisement

ಪೊಲೀಸರು ಶಿವಣ್ಣ ಜತೆ ಸೆಲ್ಫಿಗಳನ್ನೂ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next