Advertisement

ಮಂಗಳವಾರದ ರಾಶಿ ಫಲ : ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ದೂರದ ಮಿತ್ರರಿಂದ ಸಹಕಾರ

07:19 AM Nov 08, 2022 | Team Udayavani |

ಮೇಷ: ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ ಮಾಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಗುರುಹಿರಿಯರ ಮೇಲಧಿಕಾರಿಗಳ ಸಹಕಾರ ಪ್ರೋತ್ಸಾಹದಿಂದ ಗಣನೀಯ ಅಭಿವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ಸ್ಥಾನ ಗೌರವಾದಿ ಪ್ರಾಪ್ತಿ.

Advertisement

ವೃಷಭ: ಸುದೃಢ ಆರೋಗ್ಯ. ಜವಾಬ್ದಾರಿ ಯುತ ನಡೆಯಿಂದ ಯಶಸ್ಸು ಲಭ್ಯ ಹಣಕಾಸಿನ ವಿಚಾರದಲ್ಲಿ ಅವಲಂಭನೆ. ವಿದೇಶ ಮೂಲದ ಸಂಪಾದನೆ. ಎಚ್ಚರಿಕೆಯಿಂದ ಅನ್ಯರ ಸಹಾಯ ಪಡೆಯಿರಿ. ದೇವತಾ ಸಂದರ್ಶನ. ವಿದ್ಯಾರ್ಥಿಗಳಿಗೆ ತೊಂದರೆ.

ಮಿಥುನ: ಉತ್ತಮ ಆರೋಗ್ಯ. ವಾಕ್‌ಚತುರತೆಯಿಂದ ಉದ್ಯೋಗ ವ್ಯವಹಾರದಲ್ಲಿ ಸಫ‌ಲತೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ದೂರದ ಮಿತ್ರರಿಂದ ಸಹಕಾರ. ಸಾಂಸಾರಿಕ ಸಣ್ಣ ಪ್ರಯಾಣ. ಧಾರ್ಮಿಕ ವಿಚಾರದಲ್ಲಿ ಪರಿಶ್ರಮದಿಂದ ಸಫ‌ಲತೆ.

ಕರ್ಕ: ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ಪಾಲುದಾರರ ಸಹಕಾರ ಅನಿವಾರ್ಯವಾದೀತು. ಸ್ಥಿರ ಆಸ್ತಿಗಳಿಂದ ಧನವೃದ್ದಿ. ಬಂಧುಗಳಿಂದ ಸಹಕಾರ. ದಂಪತಿ ಗಳಿಗೆ ಪರಸ್ಪರರಿಂದ ಲಾಭ. ಹಿರಿಯರ ಸ್ಥಿತಿ ಉತ್ತಮ.

ಸಿಂಹ: ಆರೋಗ್ಯ ಉತ್ತಮ ಉದ್ಯೋಗ ವ್ಯವಹಾರ ವಿಚಾರದಲ್ಲಿ ಅಧಿಕ ಜವಾಬ್ದಾರಿ ಹಾಗೂ ಪರಿಶ್ರಮ ಅಗತ್ಯ. ಗೌರವಯುತ ಹಣ ಸಂಪಾದನೆ. ಅನ್ಯರ ಸಹಾಯ ನಿರೀಕ್ಷಿಸದಿರಿ. ದಾಂಪತ್ಯ ಸಾಮರಸ್ಯಕ್ಕೆ ಹೆಚ್ಚಿದ ಶ್ರಮ. ವಿದ್ಯಾರ್ಥಿಗಳಿಗೆ ಪ್ರಗತಿ.

Advertisement

ಕನ್ಯಾ: ಸುದೃಢ ಆರೋಗ್ಯ. ಉದ್ಯೋಗ ವ್ಯವಹಾರದಲ್ಲಿ ಸಂತೋಷ ವೃದ್ಧಿ. ನಿರೀಕ್ಷೆಗೂ ಮೀರಿದ ಅಭಿವೃದ್ಧಿ. ಹಣಕಾಸಿನ ವಿಚಾರದಲ್ಲಿ ತೊಂದರೆ ಆಗದಂತೆ ಗಮನಿಸಿ. ಸ್ವಪ್ರಯತ್ನಕ್ಕೆ ಆದ್ಯತೆ ನೀಡಿ. ಗುರುಹಿರಿಯರ ಸ್ಪಷ್ಟ ಮಾರ್ಗದರ್ಶನ ಲಭ್ಯ.

ತುಲಾ: ಆರೋಗ್ಯ ಉತ್ತಮ ದೂರದ ವ್ಯವಹಾರ ಗಳಲ್ಲಿ ಪ್ರಗತಿ. ಅಧಿಕ ಧನಾರ್ಜನೆ. ಗುರುಹಿರಿಯರ ಮೇಲಧಿಕಾರಿಗಳ ಸಹಕಾರ ಮಾರ್ಗದರ್ಶಭದ ಲಾಭ. ಸಹೋದ್ಯೋಗಿಗಳಿಂದ ಪ್ರೋತ್ಸಾಹ. ಭೂಮಿ ವಾಹನಾದಿ ವಿಚಾರದಲ್ಲಿ ಎಚ್ಚರಿಕೆ ನಡೆ ಅಗತ್ಯ. ಸಾಂಸಾರಿಕ ಸುಖ ಉತ್ತಮ.

ವೃಶ್ಚಿಕ: ಅಧಿಕ ಕಾರ್ಯ ಚಟುವಟಿಕೆಗಳಿಂದ ಕೂಡಿದ ದಿನ. ಎಲ್ಲಾ ವಿಧದಲ್ಲೂ ಯಶಸ್ಸು ಲಭಿಸುವ ಅವಕಾಶ. ಈ ದಿನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಗೌರವ ಅಧಿಕ ಧನಾರ್ಜನೆ, ಗುರುಹಿರಿಯರ ಪ್ರೋತ್ಸಾಹ ಇತ್ಯಾದಿ ಶುಭಫ‌ಲ.

ಧನು: ಆರೋಗ್ಯದಲ್ಲಿ ಸುಧಾರಣೆ. ಜವಾಬ್ದಾರಿ ಯುತ ಕೆಲಸ ಕಾರ್ಯ ವೈಖರಿಯಿಂದ ಜನಮನ್ನಣೆ. ಆಸ್ತಿ ವಿಚಾರದಲ್ಲಿ ಮುನ್ನಡೆ. ಹಿರಿಯರ ಆರೋಗ್ಯ ಗಮ ನಿಸಿ. ಅನ್ಯರ ಸಹಕಾರ ನಿರೀಕ್ಷಿಸದಿರಿ. ಅಧ್ಯಯನ ಪ್ರವೃತ್ತರಿಗೆ ಸಂಶೋಧಕರಿಗೆ ಅನು ಕೂಲಕರ ವಾತಾವರಣ.

ಮಕರ: ಆರೋಗ್ಯ ಸ್ಥಿರ. ದೂರದ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ. ಸ್ಥಾನಾದಿ ಸುಖ. ರಾಜಕೀಯ ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ. ಆಸ್ತಿ ವಿಚಾರದಲ್ಲಿ ಮುನ್ನಡೆ. ಸಾಂಸಾರಿಕ ಸುಖ ಹರ್ಷದಾಯಕ. ಮಕ್ಕಳ ವಿಚಾರದಲ್ಲಿ ನೆಮ್ಮದಿ. ಹಿರಿಯರ ಆರೋಗ್ಯ ವೃದ್ಧಿ.

ಕುಂಭ: ಉತ್ತಮ ವಾಕ್‌ಚತುರತೆ. ಗಾಂಭೀರ್ಯ ಪ್ರದರ್ಶನದಿಂದ ಎಲ್ಲಾ ವ್ಯವಹಾರಗಳಲ್ಲಿ ಜಯ. ಆಸ್ತಿ ವಾಹನಾದಿಲಾಭ. ಅಧಿಕ ಗೌರವದಿಂದ ಕೂಡಿದ ಧನಾರ್ಜನೆ. ಧಾರ್ಮಿಕ ಚಟುವಟಿಕೆಗಳಲ್ಲಿ ನೇತೃತ್ವ. ಆರೋಗ್ಯದಲ್ಲಿ ಗಣನೀಯ ವೃದ್ಧಿ.

ಮೀನ: ಉತ್ತಮ ಆರೋಗ್ಯ. ಜವಾಬ್ದಾರಿಯುತ ಉದ್ಯೋಗ ವ್ಯವಹಾರದಿಂದ ಎಲ್ಲರ ಪ್ರಶಂಸೆ ಸಂಭವ. ಸಂದರ್ಭಕ್ಕೆ ಸರಿಯಾದ ಉಪಾಯ ಆಲೋಚನೆಯಿಂದ ಕೂಡಿದ ಕಾರ್ಯವೈಖರಿ. ದೂರ ಪ್ರಯಾಣದಿಂದಲೂ ಧನಾರ್ಜನೆ ಸಂಭವ. ಸಂಸಾರಕ್ಕೆ ಗಮನ ನೀಡಿ. ಆಸ್ತಿ ಭೂಮಿ ವಾಹನಾದಿ ವಿಚಾರಗಳಲ್ಲಿ ತಾಳ್ಮೆಯ ನಿರ್ಣಯ ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next