Advertisement

ಸಂತೇಬಾಚಹಳ್ಳಿಗೆ ಖಾಸಗಿ ಕೊಳವೆ ಬಾವಿಗಳೇ ಆಸರೆ

03:38 PM May 03, 2021 | Team Udayavani |

ಕೆ.ಆರ್‌.ಪೇಟೆ: ಸಂತೇಬಾಚಹಳ್ಳಿ ಹೋಬಳಿಯಲ್ಲಿನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು,ಖಾಸಗಿ ಕೊಳವೆ ಬಾವಿಗಳಿಂದ ನೀರುಹರಿಸಲಾಗುತ್ತಿದೆ.ಕಷ್ಟದ ಬದುಕು:ಸಂತೇಬಾಚಹಳ್ಳಿ ಹೋಬಳಿಯಾದ್ಯಂತಬಿಸಿಲ ತಾಪ ಹೆಚ್ಚಾಗಿದ್ದು, ಕುಡಿವ ನೀರಿನ ಕೊರತೆಯಿಂದ ಜನ, ಜಾನುವಾರು ತತ್ತರಿಸುತ್ತಿವೆ.

Advertisement

ಸಮೃದ್ಧವಾಗಿ ಮಳೆಯಾದರೆ ಮಾತ್ರ ಇಲ್ಲಿನ ಕೆರೆ ಕಟ್ಟೆಗಳುತುಂಬುತ್ತವೆ. ಇಲ್ಲವಾದರೆ ಬರದ ಛಾಯೆಯಲ್ಲಿಕಷ್ಟದ ಬದುಕು ನಡೆಸಬೇಕಾಗುತ್ತದೆ.ಬೇಸಿಗೆ ಆರಂಭದಲ್ಲಿಯೇ ಬಹುತೇಕ ಕೆರೆ ಕಟ್ಟೆಗಳುಒಣಗಿದ್ದು, ನೀರಿನ ಸಮಸ್ಯೆ ತೀವ್ರವಾಗಿದೆ. ಬಹುತೇಕಗ್ರಾಮಗಳು ಕುಡಿವ ನೀರಿಲ್ಲದೇ ಕಂಗಾಲಾಗಿವೆ.

ಕೆಲವು ಬಲಾಡ್ಯ ರೈತರು ತಮ್ಮ ಬಂಡತನದಿಂದಕೆರೆಕಟ್ಟೆಗಳಲ್ಲಿ ಇರುವ ನೀರನ್ನು ತಮ್ಮ ಜಮೀನಿಗೆರಾತ್ರಿಹೊತ್ತು ಅಕ್ರಮವಾಗಿ ಹೊಡೆದುಕೊಂಡು ಕೆರೆಕಟ್ಟೆಗಳು ಖಾಲಿಯಾಗಿ ಜಾನುವಾರುಗಳಿಗೆ ಕುಡಿಯಲುನೀರಿಲ್ಲದೆ ಒಣಗುತ್ತಿವೆ. ಜನರಿಗೆ ಕುಡಿಯಲುನೀರಿಲ್ಲದೇ ಪರದಾಡುತ್ತಿರುವ ಸಂದರ್ಭದಲ್ಲಿ ಜಾನುವಾರುಗಳಿಗೆ ನೀರು, ಮೇವಿನ ಕಥೆ ಹೇಳತೀರದು.

ಇದರಿಂದ ಜಾನುವಾರುಗಳನ್ನು ಕಡಿಮೆ ಬೆಲೆಗೆ ತಮ್ಮರಾಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ,ಗೋಹತ್ಯೆ ಕಾಯ್ದೆ ಜಾರಿಯಾದ ಮೇಲೆ ರೈತರರಾಸುಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದು,ಮೇವು ಇಲ್ಲ, ನೀರು ಇಲ್ಲ, ರಾಸುಗಳನ್ನು ಕೊಳ್ಳುವವರೂ ಇಲ್ಲ ಎಂದು ರೈತರು ಕಂಗಾಲಾಗಿದ್ದಾರೆ.

ಅಪ್ಪನಹಳ್ಳಿ ಗ್ರಾಮದಲ್ಲಿ ಕಳೆದ ಐದು ತಿಂಗಳಿನಿಂದಈಚೆಗೆ 2 ಕೊಳವೆ ಬಾವಿ ಕೊರೆಸಲಾಗಿದೆ. ಆದರೂಕೊಳವೆ ಬಾವಿಗಳಲ್ಲಿ ಕುಡಿಯಲು ನೀರಿನ ಸಮಸ್ಯೆಯಿಂದ ಅಪ್ಪನಹಳ್ಳಿ ಗ್ರಾಮಸ್ಥರು ಒದ್ದಾಡುತ್ತಿದ್ದಾರೆ.ರೈತರು ಕೊರೆಸಿರುವ ಕೊಳವೆ ಬಾವಿಗಳು ಗ್ರಾಮದಜನ, ಜಾನುವಾರುಗಳ ನೀರಿನ ದಾಹ ತಣಿಸುತ್ತಿವೆ.

Advertisement

ಅಂತರ್ಜಲ ಮಟ್ಟ ಕುಸಿತ: ಸಂತೇಬಾಚಹಳ್ಳಿಯಹೋಬಳಿ ಶೇ.80 ಗ್ರಾಮಗಳ ಜನ ಕುಡಿವ ನೀರಿಗಾಗಿಕೊಳವೆಬಾವಿ ಆಶ್ರಯಿಸಿದ್ದಾರೆ. ಶೇ.20 ಜನ ಕೆರೆನೀರನ್ನು ಅವಲಂಭಿಸಿದ್ದಾರೆ. ಬಿಸಿಲಿನ ತಾಪಹೆಚ್ಚುತ್ತಿದ್ದಂತೆ ಕೆರೆಗಳೂ ಖಾಲಿಯಾಗುತ್ತಿದ್ದು,ಅಂತರ್ಜಲ ಮಟ್ಟ ಕುಸಿಯುತ್ತಿದೆ. 400 ಅಡಿಗಳಿಗೆಸಿಗುತ್ತಿದ್ದ ನೀರು ಈಗ 700 ಅಡಿ ಕೊರೆಸಿದರೂಸಿಗುತ್ತಿಲ್ಲ.

ಹೀಗಾಗಿ ಕೊಳವೆ ಬಾವಿಗಳನ್ನೇಅವಲಂಭಿಸಿರುವ ಗ್ರಾಮಗಳ ಜನ ಮತ್ತಷ್ಟು ಸಂಕಷ್ಟಕ್ಕೆಸಿಲುಕುವ ಸಾಧ್ಯತೆ ಇದೆ.ಸಮರ್ಪಕಕುಡಿಯುವನೀರುಕಳೆದ ತಿಂಗಳು ಅಪ್ಪನಹಳ್ಳಿ ಗ್ರಾಮದ ಕುಡಿಯುವನೀರಿಗಾಗಿ ಒಂದು ಕೊಳವೆ ಬಾವಿಯನ್ನು ಕೊರೆಸಿದ್ದು,ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ.

ಕಳೆದ ವಾರಬಿದ್ದ ಮಳೆಯಿಂದಾಗಿ ವಿದ್ಯುತ್‌ ವ್ಯತ್ಯಯವಾಗಿ ಕೊಳವೆಬಾವಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಲಾಕ್‌ಡೌನ್‌ ಪರಿಣಾಮ ಕೊಳವೆ ಬಾವಿ ರಿಪೇರಿಯ ನೌಕ ರರುಬಂದು ರೀಪೇರಿ ಮಾಡಲು ಸಾಧ್ಯವಾಗಿರಲಿಲ್ಲ. ಕುಡಿವನೀರಿನ ಸಮಸ್ಯೆ ಅರಿತು ತಕ್ಷಣದಲ್ಲೇ ರಿಪೇರಿ ಮಾಡಿಕುಡಿಯುವ ನೀರಿನ ವ್ಯವಸ್ಥೆà ಮಾಡಲಾಗಿದೆ ಎಂದುರಂಗನಾಥಪುರ ಕ್ರಾಸ್‌ ಪಿಡಿಒ ಕುಮಾರ್‌ ತಿಳಿಸಿದ್ದಾರೆ.

ಅಪ್ಪನಹಳ್ಳಿ ಅರುಣ್‌

Advertisement

Udayavani is now on Telegram. Click here to join our channel and stay updated with the latest news.

Next