Advertisement

ತಿರುಮಲ: ಅನ್ನಪ್ರಸಾದ ಮಳಿಗೆ ಹೆಚ್ಚಳ; ಖಾಸಗಿ ರೆಸ್ಟೋರೆಂಟ್‌ ಗಳು, ಹೊಟೇಲ್‌ಗ‌ಳಿಗೆ ಬೀಗ 

01:29 AM Feb 19, 2022 | Team Udayavani |

ಹೈದರಾಬಾದ್‌: ಇನ್ನು ಮುಂದೆ ದೇಗುಲ ನಗರಿ ತಿರುಮಲದಲ್ಲಿ ಖಾಸಗಿ ಹೊಟೇಲ್‌ಗ‌ಳು ಹಾಗೂ ರೆಸ್ಟೋರೆಂಟ್‌ ಗಳು ಕಾಣಸಿಗು­ವುದಿಲ್ಲ. ಅದರ ಬದಲಾಗಿ, ಉಚಿತ ಅನ್ನ ಪ್ರಸಾದ ವಿತರಿಸುವ ಮತ್ತಷ್ಟು ಕಿಯೋಸ್ಕ್ ಗಳು ತಲೆ ಎತ್ತಲಿವೆ.

Advertisement

ತಿರುಮಲದ ತಿರುಪತಿ ದೇವಸ್ಥಾನಮ್ಸ್‌ ಮಂಡಳಿ(ಟಿಟಿಡಿ) ಈ ಮಹತ್ವದ ನಿರ್ಧಾರ ಕೈಗೊಂ­ಡಿದ್ದು, ದೇಗುಲ ನಗರಿಯ ಎಲ್ಲ ಖಾಸಗಿ ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಿದೆ. ಅಲ್ಲಿ ಹೆಚ್ಚು ಉಚಿತ ಅನ್ನ ಪ್ರಸಾದಮ್‌ ಮಳಿಗೆಗಳನ್ನು ತೆರೆ­ಯಲು ನಿರ್ಧರಿಸಿದೆ.

ತಿರುಮಲ­ದಲ್ಲಿನ ಉಪಾಹಾರ­ಗೃಹಗಳು ಹಾಗೂ ರೆಸ್ಟೋರೆಂಟ್‌ಗಳಿಗೆ ಬೇರೆ ಉದ್ದಿಮೆ ಮಾಡುವ ಆಯ್ಕೆಯನ್ನು ಒದಗಿಸಲಿದೆ ಎಂದು ಹೇಳಲಾಗಿದೆ.

ಇದೇ ವೇಳೆ, ಮುಂಬಯಿಯಲ್ಲಿ ಶ್ರೀವರಿ ದೇವಾಲಯ ನಿರ್ಮಾಣಕ್ಕೆ ಅಗತ್ಯವಿರುವ ಜಮೀನಿನ ವಿಚಾರದಲ್ಲಿ ಅನುಮತಿ ಪಡೆಯಲು ಸದ್ಯದಲ್ಲೇ ಸಿಎಂ ಉದ್ಧವ್‌ ಠಾಕ್ರೆ ಅವರನ್ನು ಭೇಟಿ ಮಾಡುವುದಾಗಿ ಟ್ರಸ್ಟ್‌ ಹೇಳಿದೆ.

ಅರ್ಜಿತ ಸೇವಾ ಟಿಕೆಟ್‌ ದರವನ್ನು ಏರಿಸಲಾಗು­ವುದು ಎಂಬ ವರದಿಗಳನ್ನೂ ಟಿಟಿಡಿ ಅಲ್ಲಗಳೆ­ದಿದೆ. ಅಲ್ಲದೇ, ಸದ್ಯದಲ್ಲೇ ಅರ್ಜಿತ ಸೇವೆಯನ್ನು ಪುನರಾ ರಂಭಿಸ­ಲಾಗುವುದು ಎಂದಿದೆ.

Advertisement

ಲಡ್ಡು ಪ್ರಸಾದ ದಿಂದ 365 ಕೋಟಿ
2022 - 23ರ ಬಜೆಟ್‌ನಲ್ಲಿ ಉಲ್ಲೇಖಿಸಿರುವಂತೆ, ವೆಂಕಟೇಶ್ವರ ದೇಗುಲವು 3,096.40 ಕೋಟಿ ರೂ. ಆದಾಯ ಗಳಿಸಿದೆ. ಈ ಪೈಕಿ, ಹುಂಡಿಯಲ್ಲಿ 1,000 ರೂ. ಬಂದಿದ್ದು, ಠೇವಣಿ ಯಿಂದ ಬಂದ ಬಡ್ಡಿ ಮೊತ್ತ 668.5 ಕೋಟಿ ರೂ., ಟಿಕೆಟ್‌ ಮಾರಾಟದಿಂದ 362 ಕೋಟಿ ರೂ., ಲಡ್ಡು ಪ್ರಸಾದ ಮಾರಾಟದಿಂದ 365 ಕೋಟಿ ರೂ., ಭಕ್ತರು ಮುಡಿ ಕೊಟ್ಟಿದ್ದನ್ನು ಮಾರಾಟ ಮಾಡಿ 126 ಕೋಟಿ ರೂ. ಆದಾಯ ಬಂದಿದೆ ಎಂದು ಟಿಟಿಡಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next