Advertisement

ಕಾಡಾನೆಗೆ ಕಬ್ಬು ನೀಡಲು ಹೋಗಿ 75 ಸಾವಿರ ರೂ. ದಂಡ ಕಟ್ಟಿದ ಲಾರಿ ಚಾಲಕ

08:42 PM Dec 06, 2022 | Team Udayavani |

ಸತ್ಯಮಂಗಲ (ತಮಿಳುನಾಡು): ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ತೆರಳುತ್ತಿದ್ದ ಲಾರಿಯ ಚಾಲಕ ಕಾಡಾನೆಗೆ ಕಬ್ಬು ನೀಡಿದ ಕಾರಣ ತಮಿಳುನಾಡು ಅರಣ್ಯ ಇಲಾಖೆ 75 ಸಾವಿರ ರೂ. ದಂಡ ವಿಧಿಸಿದೆ.

Advertisement

ಸತ್ಯಮಂಗಲ ತಾಲೂಕಿನ ಹಾಸನೂರು ಚೆಕ್‌ ಪೋಸ್ಟ್‌ ಸಮೀಪ ಲಾರಿ ಚಾಲಕ ನಂಜನಗೂಡು ತಾಲೂಕಿನ ಸಿದ್ದರಾಜು ಎಂಬಾತ ಕಾಡಾನೆಗೆ ಕಬ್ಬು ನೀಡಿದ್ದನ್ನು ಗಸ್ತಿನಲ್ಲಿದ್ದ ತಮಿಳುನಾಡು ಅರಣ್ಯ ಸಿಬ್ಬಂದಿ ಗಮನಿಸಿದ್ದಾರೆ. ನಂತರ ಮೇಲಧಿಕಾರಿಗಳ ಆದೇಶದಂತೆ ಚಾಲಕನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, 75 ಸಾವಿರ ರೂ. ದಂಡ ವಿಧಿಸಿದ್ದಾರೆ.

ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ಆಹಾರ ನೀಡುವುದು ನಿಷಿದ್ಧ. ಮನುಷ್ಯರು ನೀಡುವ ಆಹಾರಗಳಿಂದ ವನ್ಯಜೀವಿಗಳ ಸಹಜ ಆಹಾರ ಪದ್ಧತಿಯ ಮೇಲೆ ಪರಿಣಾಮ ಬೀರಬಹುದು ಹಾಗೂ ಸೋಂಕು ತಗುಲಿ, ವನ್ಯಜೀವಿಗಳಿಗೆಲ್ಲ ಹರಡಬಹುದೆಂಬ ಕಾರಣದಿಂದ ಆಹಾರ ನೀಡುವಿಕೆಯನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ಬಿಸಿಎಂ ಹಾಸ್ಟೆಲ್ ಗಳಿಗೆ 100 ಕೋಟಿ ವೆಚ್ಚದ ಮೂಲ ಸೌಕರ್ಯಾಭಿವೃದ್ಧಿ ಪ್ರಸ್ತಾವನೆಗೆ ಸಚಿವರ ಅನುಮೋದನೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next