Advertisement

ಟಿಆರ್‌ಎಸ್‌ ಅಲ್ಲ, ಇನ್ನು ಬಿಆರ್‌ಎಸ್‌; ಎಚ್‌ಡಿಕೆ ಉಪಸ್ಥಿತಿಯಲ್ಲಿ ಹೊಸ ಧ್ವಜ ಅನಾವರಣ

10:12 PM Dec 09, 2022 | Team Udayavani |

ಹೈದರಾಬಾದ್‌: ಇದುವರೆಗೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಕ್ಷ ಇನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಎಂದು ಬದಲಾಗಲಿದೆ. ಹೆಸರು ಬದಲಾವಣೆಗೆ ಭಾರತದ ಚುನಾವಣಾ ಆಯೋಗ (ಇಸಿಐ)ಅನುಮತಿ ನೀಡಿದೆ.

Advertisement

ಶುಕ್ರವಾರ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರು ಬಿಆರ್‌ಎಸ್‌ನ ಹೊಸ ಧ್ವಜ ಅನಾವರಣಗೊಳಿಸಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ, ಬಹುಭಾಷಾ ನಟ ಪ್ರಕಾಶ್‌ ರಾಜ್‌ ಸೇರಿದಂತೆ ಪ್ರಮುಖರು ಇದ್ದರು. ದೇಶವ್ಯಾಪಿ ತನ್ನ ಕಾರ್ಯಕ್ಷೇತ್ರ ವಿಸ್ತರಿಸುವ ನಿಟ್ಟಿನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯನ್ನು ಭಾರತ ರಾಷ್ಟ್ರ ಸಮಿತಿ ಎಂದು ಬದಲಾಯಿಸುವ ನಿರ್ಧಾರವನ್ನು ಕೆಸಿಆರ್‌ ಕೈಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next