Advertisement

ವಿವಾದಕ್ಕೆ ತಿರುಗಿದ ರಾಜಕಾಲುವೆ ಒತ್ತುವರಿ; ಕಾಂಪ್ಲೆಕ್ಸ್ ಬಿಲ್ಡಿಂಗ್ ತೆರವು ಕಾರ್ಯಾಚರಣೆ

10:13 AM Nov 25, 2021 | Team Udayavani |

ಗಂಗಾವತಿ: ಜುಲೈ ನಗರದ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವ ವಾಣಿಜ್ಯ ಕಾಂಪ್ಲೆಕ್ಸ್ ತೆರವು ಕಾರ್ಯಾಚರಣೆ ಇದೀಗ ವಿವಾದಕ್ಕೆ ತಿರುಗಿದೆ. ಇದರಿಂದ ಗುರುವಾರ ಬೆಳಿಗ್ಗೆ ತೆರವು ಕಾರ್ಯಕ್ಕೆ ತೆರಳಿದ್ದ ನಗರಸಭೆಯ ಸಿಬ್ಬಂದಿ ವರ್ಗವು ಬರಿಗೈಲಿ ವಾಪಸ್ಸಾದ ಘಟನೆ ಜರುಗಿದೆ.

Advertisement

ನಗರದ ಎಪಿಎಂಸಿ ಬನ್ನಿಗಿಡ ಕ್ಯಾಂಪ್ ಸೇರಿದಂತೆ ಮೇಲ್ಭಾಗದ ಮಳೆ ನೀರು ಮತ್ತು ಚರಂಡಿ ನೀರು ನಗರದ ಖಬರಸ್ಥಾನ ಮಧ್ಯಭಾಗದಲ್ಲಿರುವ ರಾಜಕಾಲುವೆಯ ಮಾರ್ಗವಾಗಿ ದುರುಗಮ್ಮನ ಹಳ್ಳ ಸೇರುತ್ತದೆ. ಜುಲೈ ನಗರಕ್ಕೆ ಹೋಗುವ ರಸ್ತೆ ಮಧ್ಯೆ ಇರುವ ಈ ರಾಜ ಕಾಲುವೆ ಮೇಲ್ಭಾಗದಲ್ಲಿ ಇತ್ತೀಚೆಗೆ ಶಾಪಿಂಗ್ ಕಾಂಪ್ಲೆಕ್ಸ್ ಒಂದನ್ನು ನಿರ್ಮಿಸಲಾಗಿದೆ. ಸ್ಥಳೀಯರ ಆಕ್ಷೇಪದ ಹಿನ್ನೆಲೆಯಲ್ಲಿ ಈ ಮಳಿಗೆ ತೆರವುಗೊಳಿಸಲು ಕಳೆದ ಮೂರು ತಿಂಗಳ ಹಿಂದೆ ನಗರಸಭೆಯವರು ಯತ್ನಿಸಿದ ಸಂದರ್ಭದಲ್ಲಿ ಕೆಲ ವ್ಯಕ್ತಿಗಳ ಒತ್ತಡದಿಂದಾಗಿ ತೆರವು ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇತ್ತೀಚೆಗೆ ರಾಜ್ಯದಲ್ಲಿ ಸುರಿದ ಅಕಾಲಿಕ, ಸತತ ಮಳೆಯಿಂದ ಹೆಚ್ಚಿನ ಅನಾಹುತ ಸಂಭವಿಸಿದ್ದರಿಂದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದಲ್ಲಿ ರಾಜಕಾಲುವೆಗಳ ಒತ್ತುವರಿ ಮಾಡಿರುವ ಕಟ್ಟಡಗಳನ್ನು ಕೂಡಲೇ ತೆರವು ಮಾಡುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದರು.

ಇದನ್ನೂ ಓದಿ:ಇನ್ನೆರಡು ಬ್ಯಾಂಕ್‌ ಖಾಸಗಿಗೆ? ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ

ಜುಲೈ ನಗರದ ರಾಜ ಕಾಲುವೆಯ ಮೇಲಿನ ಕಟ್ಟಡವನ್ನು ತೆರವು ಮಾಡಲು ಗುರುವಾರ ನಗರಸಭೆಯ ಪೌರಾಯುಕ್ತರ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ತೆರಳಿದ್ದ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರು ಸೇರಿದಂತೆ ಕೆಲವು ನಗರಸಭೆ ಸದಸ್ಯರು ಹಾಗೂ ಒಂದು ಸಮುದಾಯದ ಜನಾಂಗದವರು ತೆರವು ಕಾರ್ಯಾಚರಣೆ ಬಗ್ಗೆ ಆಕ್ಷೇಪವೆತ್ತಿದ್ದರು. ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ನಗರ ಸಭೆಯವರು ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ ಈ ವಾಣಿಜ್ಯ ಮಳಿಗೆ ಖಬರಸ್ಥಾನದ ಆಸ್ತಿಯಲ್ಲಿ ಇರುವುದರಿಂದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಾಗಿದೆ. ಆದ್ದರಿಂದ ಇದನ್ನು ತೆರವುಗೊಳಿಸುವಂತೆ ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದರು.

Advertisement

ಎರಡು ದಿನ ಕಾಲಾವಕಾಶ: ರಾಜಕಾಲುವೆ ಮೇಲೆ ನಿರ್ಮಿಸಿದ ವಾಣಿಜ್ಯ ಮಳಿಗೆಯನ್ನು ತೆರವು ಕಾರ್ಯಾಚರಣೆ ಈ ಹಿಂದೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೆಲವರ ಮನವಿಯ ಮೇರೆಗೆ ಕಾರ್ಯಾಚರಣೆ ಇಳಿಸಲಾಗಿತ್ತು. ಇದೀಗ ಮುಖ್ಯಮಂತ್ರಿಗಳ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಜುಲೈ ನಗರದ ರಾಜಕಾಲುವೆ ನಿರ್ಮಿಸಿದ ವಾಣಿಜ್ಯ ಮಳಿಗೆಯನ್ನು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಖಬರಸ್ಥಾನ ಸಮಿತಿಯವರು ಮತ್ತು ಕೆಲ ಮುಖಂಡರ ಮನವಿ ಮೇರೆಗೆ ಈ ಕಾರ್ಯಾಚರಣೆಯನ್ನು ಎರಡು ದಿನದ ಮಟ್ಟಿಗೆ ನಿಲ್ಲಿಸಲಾಗಿದೆ. ರಸ್ತೆ ನದಿ ಹಳ್ಳ ಕೊಳ್ಳ ರಾಜಕಾಲುವೆ ನೈಸರ್ಗಿಕವಾಗಿದ್ದು, ಇವುಗಳ ಮೇಲೆ ಯಾವುದೇ ಕಟ್ಟಡಗಳ ನಿರ್ಮಿಸಬಾರದು. ಇದರಿಂದ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆಯಿದೆ. ಗಂಗಾವತಿ ನಗರದಲ್ಲಿ ಚರಂಡಿ ರಾಜಕಾಲುವೆ ಮತ್ತು ಹಳ್ಳದ ಒತ್ತುವರಿ ಬಗ್ಗೆ ದೂರುಗಳಿದ್ದು ಶೀಘ್ರದಲ್ಲೇ ಎಲ್ಲಾ ಕಡೆ ಕಾರ್ಯಾಚರಣೆ ಮಾಡಿ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ.

ಜುಲೈ ನಗರ ರಾಜಕಾಲುವೆ ಒತ್ತುವರಿ ಮಳಿಗೆ ತೆರವು ಕಾರ್ಯ ಎರಡು ದಿನದ ಮಟ್ಟಿಗೆ ನಿಲ್ಲಿಸಲಾಗಿದೆ. ನಂತರ ತೆರವುಗೊಳಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next