Advertisement

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ; ಮಮತಾ ಸರ್ಕಾರದ ಕಾನೂನು ಸಚಿವ ಘಟಕ್ ನಿವಾಸದ ಮೇಲೆ CBI ದಾಳಿ

11:51 AM Sep 07, 2022 | Team Udayavani |

ಕೋಲ್ಕತಾ: ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ (ಸೆಪ್ಟೆಂಬರ್ 07) ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಕಾನೂನು ಸಚಿವರಾಗಿರುವ ಮೂಲೊಯ್ ಘಟಕ್ ನಿವಾಸದ ಮೇಲೆ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಬೆಳಗಾವಿ ಏರ್ ಪೋರ್ಟ್ ನಲ್ಲಿ ಕತ್ತಿ ಪಾರ್ಥಿವ ಶರೀರ ಆಗಮನಕ್ಕೆ‌ ಕಾಯುತ್ತಿರುವ ಅಭಿಮಾನಿಗಳು

ಅಸಾನ್ಸೋಲ್ ನಲ್ಲಿರುವ ಘಟಕ್ ಅವರ ಎರಡು ನಿವಾಸಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಶೋಧ ಕಾರ್ಯ ನಡೆಸುತ್ತಿದ್ದು, ಕಚೇರಿಯಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

ಅಸಾನ್ಸೋಲ್ ನ ಘಟಕ್ ನಿವಾಸದ ಮುಖ್ಯ ದ್ವಾರವನ್ನು ಬಂದ್ ಮಾಡಿದ್ದು, ಯಾರನ್ನೂ ಹೊರಗೆ ಹೋಗಲು ಮತ್ತು ಒಳ ಬರಲು ಸಿಬಿಐ ಅಧಿಕಾರಿಗಳು ಬಿಡುತ್ತಿಲ್ಲ ಎಂದು ವರದಿ ಹೇಳಿದೆ. ಕೋಲ್ಕತಾ ಮತ್ತು ಅಸಾನ್ಸೋಲ್ ಸೇರಿದಂತೆ ಸುಮಾರು ಏಳು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ.

ಅಸಾನ್ಸೋಲ್ ನ ಅಫ್ತಾರ್ ರಸ್ತೆ ಗಾರ್ಡನ್ ಮತ್ತು ಜೆಲ್ಲಿದಾಂಗಾದಲ್ಲಿರುವ ನಿವಾಸಗಳ ಮೇಲೆ ಸಿಬಿಐ ಮೊದಲು ದಾಳಿ ನಡೆಸಿದ್ದು, ಬಳಿಕ ಘಟಕ್ ಅವರ ಪೂರ್ವಿಕರ ಮನೆ ಮೇಲೆ ದಾಳಿ ನಡೆಸಿರುವುದಾಗಿ ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next