Advertisement

ತ್ರಿಬ್ಬಲ್‌ ರೈಡಿಂಗ್‌ ಅಪಘಾತಕ್ಕೆ ಪರಿಹಾರ ಇಲ್ಲ: ಮದ್ರಾಸ್‌ ಹೈಕೋರ್ಟ್‌ನ ಮಹತ್ವದ ತೀರ್ಪು

10:14 PM Aug 22, 2022 | Team Udayavani |

ಚೆನ್ನೈ: ದ್ವಿಚಕ್ರ ವಾಹನದಲ್ಲಿ ನಿಯಮ ಮೀರಿ ಮೂವರು ಪ್ರಯಾಣಿಸುತ್ತಿದ್ದ ಕಾರಣ ಚಾಲಕನ ಕುಟುಂಬಕ್ಕೆ ಮೋಟಾರು ವಾಹನಗಳ ನಿಯಮಗಳ ಅನ್ವಯ ಪರಿಹಾರ ನೀಡಲು ಸಾಧ್ಯವಾಗದು. ಜತೆಗೆ ಆತ ಇನ್ನಿಬ್ಬರ ಸಾವಿಗೆ ಕಾರಣನಾಗಿದ್ದಾನೆ ಎಂದು ಮದ್ರಾಸ್‌ ಹೈಕೋರ್ಟ್‌ನ ನ್ಯಾ.ಆರ್‌.ತಾರಣಿ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.

Advertisement

ಹೀಗಾಗಿ, ಮೋಟಾರು ವಾಹನಗಳ ಅಪಘಾತ ನ್ಯಾಯಮಂಡಳಿ (ಎಂಎಸಿಟಿ)ಯ ವಾದ ಒಪ್ಪಲಾಗದು ಎಂದು ಅಭಿಪ್ರಾಯಪಟ್ಟಿದೆ.

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ರಸ್ತೆ ಅಪಘಾತದಲ್ಲಿ ಅಸುನೀಗಿದ್ದರು. ಮೋಟಾರು ವಾಹನಗಳ ಅಪಘಾತ ನ್ಯಾಯಮಂಡಳಿ ಪ್ರಕರಣದ ವಿಚಾರಣೆ ನಡೆಸಿ ಬೈಕ್‌ ಚಾಲಕನ ಕುಟುಂಬಕ್ಕೆ 4,50,000 ರೂ.ಪರಿಹಾರ ಪ್ರಕಟಿಸಿತ್ತು.

ಆದರೆ, ತೀರ್ಮಾನ ಪ್ರಶ್ನಿಸಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ನಡೆದಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾ.ಆರ್‌.ತಾರಣಿ ನೇತೃತ್ವದ ನ್ಯಾಯಪೀಠ “ಅಪಘಾತದ ವೇಳೆ ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಇದು ನಿಯಮಗಳಿಗೆ ವಿರುದ್ಧವಾದದದ್ದು.

ಹೀಗಾಗಿ, ಅವರಿಬ್ಬರೂ ಅಪಘಾತಕ್ಕೆ ಕಾರಣರಾಗಿದ್ದಾರೆ. ಜತೆಗೆ ಬೈಕ್‌ ಸವಾರ ಕೂಡ ಅವರಿಬ್ಬರ ಸಾವಿಗೆ ಕಾರಣನಾಗಿದ್ದಾನೆ. ಹೀಗಾಗಿ, ಆತನ ಕುಟುಂಬಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ’ ಎಂದು ತೀರ್ಪು ನೀಡಿದೆ.

Advertisement

ವಿಮಾ ಕಂಪನಿ ನ್ಯಾಯಮಂಡಳಿ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಜತೆಗೆ ಬೈಕ್‌ ಸವಾರ ಮದ್ಯ ಸೇವಿಸಿದ್ದ, ಘಟನೆ ನಡೆದ ದಿನಾಂಕ, ಸಮಯವನ್ನು ತಪ್ಪಾಗಿ ನಮೂದಿಸಲಾಗಿದೆ ಎಂದು ವಾದಿಸಿತ್ತು. ಹೀಗಾಗಿ, ಸವಾರನಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next