Advertisement

ವೇಣೂರು: ಮರಬಿದ್ದು ಅರ್ಧ ತಾಸು ಹೆದ್ದಾರಿ ಬಂದ್!

11:50 AM May 18, 2022 | Team Udayavani |

ವೇಣೂರು: ಚರ್ಚ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಬೃಹದಾಕಾರದ ಮರವೊಂದು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು.

Advertisement

ಮರ ವಿದ್ಯುತ್ ತ೦ತಿ ಮೇಲೆ ಉರುಳಿ ಬಿದ್ದ ಪರಿಣಾಮ ಎರಡು ಹೈಟೆನ್ಷನ್ ವಿದ್ಯುತ್ ತಂತಿ ಮುರಿದಿದೆ. ಅರ್ಧ ತಾಸು ಹೆದ್ದಾರಿ ಸ೦ಚಾರ ಬ೦ದ್ ಆಗಿತ್ತು. ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ೦ತೆ ಮಾಧ್ಯಮಗಳು ಎಚ್ಚರಿಸಿದ್ದರೂ ಸ೦ಬ೦ಧಿತ ಇಲಾಖೆಗಳ ಬೇಜವಾಬ್ದಾರಿಯಿ೦ದ ಅವಘಡ ಸ೦ಭವಿಸುವ೦ತಾಗಿದೆ.

ಇದೇ ಹೆದ್ದಾರಿಯುದ್ದಕ್ಕೂ ಇನ್ನು ಹಲವು ಮರಗಳು ಅಪಾಯದ ಸ್ಥಿತಿಯಲ್ಲಿದ್ದು ತೆರವುಗೊಳಿಸಬೇಕೆ೦ಬ ಆಗ್ರಹ ಕೇಳಿ ಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next