Advertisement

ಐಎಎಸ್‌-ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

11:31 PM Aug 19, 2019 | Team Udayavani |

ಬೆಂಗಳೂರು: ಹನ್ನೊಂದು ಐಎಎಸ್‌ ಹಾಗೂ ನಾಲ್ವರು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Advertisement

ಡಾ.ಜಿ.ಕಲ್ಪನಾ- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಾ.ಎನ್‌.ಮಂಜುಳ- ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು, ಡಾ.ಶಮ ಇಕ್ಬಾಲ್‌- ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರು(ಹೆಚ್ಚುವರಿ ಹೊಣೆಗಾರಿಕೆ), ಜಿ.ಎನ್‌.ಶಿವಮೂರ್ತಿ- ಬೆಂಗಳೂರು ನಗರ ಜಿಲ್ಲಾಧಿಕಾರಿ, ಪಿ.ಎನ್‌.ರವೀಂದ್ರ- ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿ, ಆರ್‌.ಎಸ್‌.ಪೆದ್ದಪ್ಪಯ್ಯ- ಸಮಾಜ ಕಲ್ಯಾಣ ಇಲಾಖೆ ಆಯುಕ್ತರು, ಮಹಾಂತೇಶ್‌ ಬೀಳಗಿ- ದಾವಣಗೆರೆ ಜಿಲ್ಲಾಧಿಕಾರಿ,ಎಂ.ಎಸ್‌.ಅರ್ಚನಾ- ರಾಮನಗರ ಜಿಲ್ಲಾಧಿಕಾರಿ, ಡಾ.ಜಿ.ಜಗದೀಶ್‌- ಉಡುಪಿ ಡೀಸಿ, ಕೆ.ಲೀಲಾವತಿ- ಮಹಿಳಾ ಇಲಾಖೆ ನಿರ್ದೇಶಕರು, ಡಾ.ಅರುಂದತಿ ಚಂದ್ರಶೇಖರ್‌- ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿ ಆದೇಶಿಸಲಾಗಿದೆ.

ಐಪಿಎಸ್‌: ವಿಪುಲ್‌ಕುಮಾರ್‌- ದಕ್ಷಿಣ ವಲಯ ಐಜಿಪಿ, ಡಾ.ರಾಮ್‌ ನಿವಾಸ್‌ ಸೆಪಟ್‌- ಹಾಸನ ಪೊಲೀಸ್‌ ವರಿಷ್ಠಾಧಿಕಾರಿ, ಪಾಟೀಲ್‌ ವಿನಾಯಕ್‌ ವಸಂತ್‌ರಾವ್‌- ಕಲಬುರಗಿ ಪೊಲೀಸ್‌ ವರಿಷ್ಠಾಧಿಕಾರಿ, ಶಿವಕುಮಾರ್‌ ದೇವರಾಜು- ಉತ್ತರ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿ ಆಗಿ ನೇಮಿಸಿ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next