Advertisement

ಪತಿ-ಪತ್ನಿ ಪ್ರಕರಣಗಳಿಗೆ ವರ್ಗಾವಣೆ ಸಂಕಷ್ಟ

10:44 PM Dec 04, 2021 | Team Udayavani |

ಬೆಂಗಳೂರು: ಯಾವುದೇ ತಾಲೂಕಿನಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ.25ರಷ್ಟು ಶಿಕ್ಷಕರಿಗೆ ವರ್ಗಾವಣೆಗೆ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದ್ದರೂ ಪತಿ-ಪತ್ನಿ ಪ್ರಕರಣಗಳಲ್ಲಿ ಹೆಚ್ಚಿನ ಮಂದಿಗೆ ಉಪಯೋಗವಾಗುತ್ತಿಲ್ಲ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಶಿಕ್ಷಣ ಇಲಾಖೆಯು ಈವರೆಗೆ ತಾಲೂಕೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಲ್ಲಿ ಶೇ.25ರಷ್ಟು ಮಂದಿಗೆ ವರ್ಗಾವಣೆ ಅವಕಾಶ ನೀಡಿತ್ತು. ಇತ್ತೀಚೆಗೆ ಸರಕಾರವು ಈ ನಿಯಮವನ್ನು ಬದಲಾಯಿಸಿ ಒಟ್ಟಾರೆ ಮಂಜೂರಾದ ಹುದ್ದೆಗಳಲ್ಲಿ ಶೇ.25 ಹುದ್ದೆಗಳಿಗೆ ವರ್ಗಾವಣೆಗೆ ಅನುವು ಮಾಡಿಕೊಟ್ಟಿದೆ.

ಆದರೆ, ಗ್ರಾಮೀಣ ಪ್ರದೇಶದಲ್ಲಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೇರಿ ವಿವಿಧ 51 ತಾಲೂಕಿನಲ್ಲಿ ಪತಿ-ಪತ್ನಿಯರ ಪ್ರಕರಣಗಳಲ್ಲಿ ಶಿಕ್ಷಕರ ವರ್ಗಾವಣೆಗೆ ಅವಕಾಶ ಇಲ್ಲದಂತಾಗಿದೆ. ಪತಿ-ಪತ್ನಿಯರು ವರ್ಗಾವಣೆ ಮಾಡಿಸಿಕೊಂಡು ಒಂದೇ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಉದ್ದೇಶದಿಂದ ವರ್ಗಾವಣೆ ಕೋರಿದ್ದು, ಶಿಕ್ಷಕರ ಕೊರತೆ ಇರುವುದರಿಂದ ಸರಕಾರ ಸೌಲಭ್ಯ ನೀಡಿದ್ದರೂ ಪ್ರಯೋಜನ ಇಲ್ಲದಂತಾಗಿದೆ.

ಹಿಂದಿ ಶಿಕ್ಷಕರು, ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆ ಇರುವುದರಿಂದ ಈ ಶಿಕ್ಷಕರು ಸಮರ್ಪಕವಾಗಿ ವರ್ಗಾವಣೆಗೆ ಅವಕಾಶ ಸಿಗದೆ ಹಲವಾರು ಶಿಕ್ಷಕ ಪತಿ-ಪತ್ನಿಯರು ಒಂದೇ ತಾಲೂಕಿಗೆ ವರ್ಗಾವಣೆಯಾಗದೆ ದೂರ ಇರುವಂತಾಗಿದೆ.

ಶಿಕ್ಷಣ ಇಲಾಖೆಯು ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ತುಂಬದಿದ್ದರೆ, ವರ್ಗಾವಣೆ ನೀತಿಯನ್ನು ಎಷ್ಟು ಶಿಕ್ಷಕ ಸ್ನೇಹಿಯಾಗಿ  ಮಾರ್ಪಡಿಸಿದರೂ ಪ್ರಯೋಜನವಿಲ್ಲ ಎಂದು ವರ್ಗಾವಣೆ ವಂಚಿತರು ಹೇಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next