Advertisement

ದೇಶದ್ರೋಹಿಗಳಿಗೆ ಇನ್ನು ಜೈಲಿಲ್ಲ, ನೇರವಾಗಿ ಗುಂಡೇಟು

10:55 PM Feb 25, 2020 | Team Udayavani |

ವಿಜಯಪುರ: ದೇಶದ್ರೋಹಿ ಕೃತ್ಯ ಎಸಗುವವರಿಗೆ, ಪಾಕ್‌ ಪರ ಘೋಷಣೆ ಕೂಗುವ, ಫೇಸ್‌ಬುಕ್‌ ಪೋಸ್ಟ್‌ ಹಾಕುವ ದೇಶದ್ರೋಹಿಗಳಿಗೆ ಗುಂಡು ಹಾಕಬೇಕು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ದೇಶದ್ರೋಹದ ಕೆಲಸ ಮಾಡುವವರಿಗೆ ಇನ್ನು ಮುಂದೆ ಜೈಲು ಶಿಕ್ಷೆ ಇಲ್ಲ, ಗುಂಡಿಟ್ಟು ನೇರವಾಗಿ ಮೇಲಿರುವ ಜನ್ನತ್‌ಗೆ ಕಳಿಸಲಾಗುತ್ತದೆ.

Advertisement

ದೇಶದಲ್ಲಿ ಪಾಕ್‌ ಪರ ಘೋಷಣೆ ಕೂಗುವ ವ್ಯಕ್ತಿಗಳನ್ನು ಸಮರ್ಥಿಸುವಂತೆ ಹೇಳಿಕೆ ನೀಡುತ್ತಿರುವ ಎಚ್‌.ಎಸ್‌.ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕ್‌ ಏಜೆಂಟ್‌. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೋದಿ, ಅಮಿತ್‌ ಶಾ ಪಾಲ್ಗೊಂಡಿದ್ದರೆ ಎಂದು ಪ್ರಶ್ನಿಸುವ ಕಾಂಗ್ರೆಸ್‌ ನಾಯಕರು ಸೋನಿಯಾ ಗಾಂ ಧಿ, ಸಿದ್ದರಾಮಯ್ಯ ಕೂಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರೆ ಎನ್ನುವುದು ಪ್ರಶ್ನಿಸಿಕೊಳ್ಳಲಿ ಎಂದರು.

ವಾಜಪೇಯಿ ಅವರಂಥ ನಾಯಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದು ಮರೆಯಬಾರದು. ಇಷ್ಟಕ್ಕೂ ನೇತಾಜಿ ಸುಭಾಷಚಂದ್ರ ಭೋಸ್‌, ಸರ್ದಾರ್‌ ವಲ್ಲಬಭಾಯಿ ಪಟೇಲ್‌ ಪ್ರಧಾನಿ ಆಗಿದ್ದರೆ ಪಾಕ್‌ ಎಂಬ ಅಕ್ರಮ ಸಂತಾನ ಹುಟ್ಟುತ್ತಲೇ ಇರಲಿಲ್ಲ. ನೆಹರು ಸ್ವಾರ್ಥಕ್ಕಾಗಿ ಪಾಕ್‌ ಎಂಬ ಬಚ್ಚಾ ಹುಟ್ಟಿ ಕೊಂಡಿತು ಎಂದರು.

ಲವ್‌ ಯು ಪಾಕ್‌ ಆರ್ಮಿ ಶೇರ್‌: ಯುವಕ ವಶಕ್ಕೆ
ವಿಜಯಪುರ: ಪಾಕ್‌ ಪರ ಪ್ರೇಮ ತೋರುವ ದೇಶದ್ರೋಹ ಕೆಲಸ ವಿಜಯಪುರಕ್ಕೂ ವಿಸ್ತರಿಸಿದೆ. ತಾಳಿಕೋಟಿಯ ಮೇರು ಬ್ಯಾಗವಾಟ್‌ ಎಂಬಾತ ಫೇಸ್‌ಬುಕ್‌ನಲ್ಲಿ ಎ2 ಝಡ್‌ ಹೆಸರಿನ ಅಕೌಂಟ್‌ನಲ್ಲಿ “ಲವ್‌ ಯೂ ಪಾಕ್‌ ಆರ್ಮಿ’ ಎನ್ನುವ ಪೋಸ್ಟ್‌ನ್ನು ಶೇರ್‌ ಮಾಡಿದ್ದು, ಇದೀಗ ಪೊಲೀಸರ ಅತಿ ಥಿಯಾಗಿದ್ದಾನೆ. ಫೆ.22ರಂದು ಎ 2 ಝಡ್‌ ಖಾತೆಯಲ್ಲಿ ಲವ್‌ ಯೂ ಪಾಕ್‌ ಆರ್ಮಿ ಎಂದು ಬರೆದ ಪೋಸ್ಟ್‌ ಹಾಕಲಾಗಿತ್ತು. ಈ ಪೋಸ್ಟ್‌ನ್ನು ಮೇರು ಬ್ಯಾಗವಾಟ್‌ ತನ್ನ ಖಾತೆಯಿಂದ ಹಂಚಿಕೊಂಡಿದ್ದ. ಯುವಕನನ್ನು ವಶಕ್ಕೆ ಪಡೆದಿರುವ ಮುದ್ದೇಬಿಹಾಳ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next