Advertisement
ಇದರಿಂದ ದೇಶಿಯ ಗ್ರಾಮೀಣ ಕ್ರೀಡೆ ಅಳುವಿನ ಹಂಚಿಗೆ ತಲುಪುವಂತಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಖೋ ಖೋ, ಕಬಡ್ಡಿ ಕ್ರೀಡಾಪಟುಗಳು ಯುವಕರಿಗೆ ಉಚಿತವಾಗಿ ಕಬಡ್ಡಿ ತರಬೇತಿ ನೀಡುತ್ತಿದ್ದಾರೆ. ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.
Related Articles
Advertisement
ಕಬ್ಬಡಿಯಲ್ಲಿ ಯುವಕರಿಗೆ ಆದ್ಯತೆ: ಸಾಮಾನ್ಯವಾಗಿ 30ರಿಂದ 40 ವರ್ಷಗಳ ಹಿಂದೆ ಕುಣಿಗಲ್ ತಾಲೂಕಿನಲ್ಲಿ ಕಬಡ್ಡಿ ಆಟಕ್ಕೆ ಯುವ ಜನಾಂಗ ಆದ್ಯತೆ ನೀಡುತ್ತಿದ್ದರು. ಕಬಡ್ಡಿ ಆಟವನ್ನು ನೋಡಲು ಮನೆ ಮಂದಿಒಂದೆಡೆ ಕುಳಿತು ವೀಕ್ಷಿಸಿ ಸಂಭ್ರಮಪಟ್ಟು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ವಿ. ವೆಂಕಟಸುಬ್ಬಯ್ಯ, ಎಂ.ಆರ್. ಬೈರ ಶೆಟ್ಟಿ, ಕೆ.ಜಿ.ನಾರಾಯಣ್, ಬಿ.ಎಂ.ಹುಚ್ಚೇಗೌಡ, ಕೆ.ಎಸ್.ವೆಂಕಟಸುಬ್ಬಯ್ಯ, ರವಿ ಮೊದಲಾದ ಕ್ರೀಡಾ ಪಟುಗಳು ಕಬಡ್ಡಿಯನ್ನು ಕಲಿತು ರಾಜ್ಯ ಹಾಗೂರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಹಲವು ಪ್ರಶಸ್ತಿ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಜತೆಗೆ ಯುವಕರನ್ನು ಕಬಡ್ಡಿ ಆಟಕ್ಕೆ ಪ್ರೇರಣೆನೀಡಿ, ನೂರಾರು ಮಂದಿ ಕ್ರೀಡಾಪಟುಗಳಿಗೆತರಬೇತಿ ನೀಡಿ ಅವರನ್ನು ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟಕ್ಕೆ ಕಳಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಅಭೂತ ಪೂರ್ವವಾದ ಕ್ರೀಡೆಗೆ ಇತ್ತೀಚಿಗೆಮಕ್ಕಳು ಹಾಗೂ ಪೋಷಕರಿಂದ ಯಾವುದೇಪ್ರೋತ್ಸಾಹ ಸಿಗದ ಕಾರಣ ಈ ಕ್ರೀಡೆಯೂ ಮರೆಯಾಗುತ್ತಿದೆ.
ಕಬಡ್ಡಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಆಟವಾಗಿದೆ. ತನ್ನದೇ ಆದ ವೈಶಿಷ್ಟತೆ ಹೊಂದಿರುವ ಕಬಡ್ಡಿ ಆಟಗಾರಿಗೆ ದೈಹಿಕ ಶಕ್ತಿ ಬೆಳೆಯುಲು ಸಹಾಯಕ ವಾಗುವ ಜತೆಗೆ ಚತುರತೆ ಬೆಳೆಸುತ್ತದೆ. ಕಬಡ್ಡಿ ಆಟದ ವೇಳೆ ಶ್ರಮಿಶಿಸಿದ ಮೈಗೆ ಮಣ್ಣಿನ ಗುಣ ಅಂಟಿಕೊಂಡರೆ ಆರೋಗ್ಯದಿಂದ ಇರಬಹುದು. -ರಂಗಣ್ಣ, ರಾಷ್ಟ್ರೀಯ ಖೋ ಖೋ ಕ್ರೀಡಾಪಟು
ತಾಲೂಕಿನಲ್ಲಿ ಹಲವು ವರ್ಷಗಳಿಂದ ಖಾಸಗಿ ಕ್ಷೇತ್ರದಲ್ಲಿ ಕಬಡ್ಡಿ ಸೇರಿದಂತೆ ಗ್ರಾಮೀಣ ಕ್ರೀಡಾಕೂಟಗಳು ನಡೆಯದೇಇರುವುದು ಕಂಡು ಬಂದಿದೆ. ಆದರೆ,ಕಿಚ್ಚಾವಾಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆವಿದ್ಯಾರ್ಥಿಗಳು 2018-19ರಲ್ಲಿ ರಾಷ್ಟ್ರೀಯಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಕಳೆದಎರಡು ವರ್ಷದಿಂದ ತಾಲೂಕಿನ ಯಾವುದೇಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳುನಡೆಯುತ್ತಿಲ್ಲ. -ಕೆ.ಎಸ್.ಗೋಪಾಲಕೃಷ್ಣ ತಾಲೂಕು ದೈಹಿಕ ಶಿಕ್ಷಣಾಧಿಕಾರಿ
ಕ್ರೀಡೆಯು ಯುವ ಜನಾಂಗಕ್ಕೆರಾಷ್ಟ್ರೀಯ ಭಾವೈಕ್ಯತೆಗೆ ಪೂರಕವಾಗಿದೆ. ಇದಕ್ಕೆ ಯಾವುದೇ ಜಾತಿ, ಮತ,ಧರ್ಮ ಅಡ್ಡಿ ಬರಲಾಗದು. ಈ ನಿಟ್ಟಿಲ್ಲಿ ಕುಣಿಗಲ್ನಲ್ಲಿ ಯುವಕರಿಗೆ ಕಬಡ್ಡಿ ತರಬೇತಿನೀಡಿ, ಅವರನ್ನು ಪ್ರತಿಭಾವಂತ ಕಬಡ್ಡಿಕ್ರೀಡಾಪಟುಗಳನ್ನಾಗಿ ಮಾಡಿ, ಅವರಲ್ಲಿಇರುವಂತ ಕ್ರೀಡಾ ಪ್ರತಿಭೆ ಅನಾವರಣಗೊಳಿಸಿ ದೇಶಕ್ಕೆ ಕ್ರೀಡೆ ಮೂಲಕ ಸೇವೆಸಲ್ಲಿಸಲು ಪ್ರೇರಣೆ ನೀಡುವ ಉದ್ದೇಶವಿದೆ. – ಜಬೀಉಲ್ಲಾ ಖಾನ್ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು
-ಕೆ.ಎನ್.ಲೋಕೇಶ್