Advertisement

ರೈಲು ವಿಳಂಬವಾದರೆ ಅಧಿಕಾರಿಗಳಿಗೆ ಭಡ್ತಿ ಕಟ್‌

07:22 AM Jun 04, 2018 | |

ಹೊಸದಿಲ್ಲಿ: ರೈಲು ವಿಳಂಬದಿಂದ ಬೇಸತ್ತ ಪ್ರಯಾಣಿಕರಿಗೊಂದು ಸಿಹಿ ಸುದ್ದಿ. ಇನ್ನು ರೈಲು ವಿಳಂಬವಾದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಲು ರೈಲ್ವೇ ಇಲಾಖೆ ನಿರ್ಧರಿಸಿರುವುದರಿಂದ ರೈಲುಗಳು ಸಮಯಕ್ಕೆ ಸರಿಯಾಗಿ ಓಡುವ ನಿರೀಕ್ಷೆಯಿದೆ.

Advertisement

ಈ ಸಂಬಂಧ ಎಲ್ಲ ವಲಯ ರೈಲ್ವೇ ಮುಖ್ಯಸ್ಥರಿಗೆ ರೈಲ್ವೇ ಸಚಿವ ಪಿಯೂಶ್‌ ಗೋಯೆಲ್‌ ಸೂಚನೆ ನೀಡಿದ್ದು, ರೈಲು ವಿಳಂಬವಾದರೆ ಅಧಿಕಾರಿಗಳ ಭಡ್ತಿ ವಿಳಂಬವಾಗುತ್ತದೆ ಎಂದಿದ್ದಾರೆ. ಸುಧಾರಿಸಿಕೊಳ್ಳಲು ಅಧಿಕಾರಿಗಳಿಗೆ ಒಂದು ತಿಂಗಳ ಅವಕಾಶವನ್ನೂ ಅವರು ನೀಡಿದ್ದಾರೆ. ನಿರ್ವಹಣೆ ಹೆಸರಿನಲ್ಲಿ ರೈಲು ವಿಳಂಬ ಮಾಡುವಂತಿಲ್ಲ. ರೈಲು ವೇಳಾಪಟ್ಟಿಯಂತೆಯೇ ಚಲಿಸಬೇಕು ಎಂದು ವಲಯ ಮ್ಯಾನೇಜರ್‌ಗಳ ಸಭೆಯಲ್ಲಿ  ಗೋಯೆಲ್‌ ಸೂಚಿಸಿದ್ದಾರೆ ಎನ್ನಲಾಗಿದೆ. 2017-18ರಲ್ಲಿ ಶೇ.30ರಷ್ಟು ರೈಲುಗಳು ವಿಳಂಬವಾಗಿ ಚಲಿಸಿವೆ. ಅದರಲ್ಲೂ ಉತ್ತರ ರೈಲ್ವೇ ವಲಯದಲ್ಲಿ ಶೇ.49.59ರಷ್ಟು ರೈಲುಗಳು ವಿಳಂಬವಾಗಿ ಸಂಚರಿಸಿವೆ. ಹೀಗಾಗಿ ಎಲ್ಲ ವಲಯದ ಪ್ರಧಾನ ವ್ಯವಸ್ಥಾಪಕರಿಗೂ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next