Advertisement

ವಿವಿಧ ರೈಲುಗಳ ಸಂಚಾರ ರದ್ದು

12:50 AM Aug 18, 2019 | Team Udayavani |

ಹುಬ್ಬಳ್ಳಿ: ಸೊಲ್ಲಾಪುರ ಡಿವಿಜನ್‌ನ ವಾಡಸಿಂಗೆ ಹಾಗೂ ಭಲ್ವಾನಿ ನಿಲ್ದಾಣಗಳ ಮಧ್ಯೆ ನಾನ್‌ ಇಂಟರ್‌ಲಾಕಿಂಗ್‌ ಕಾರ್ಯ ನಿಮಿತ್ತ ಕೆಲ ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ.

Advertisement

ಆ.19 ಹಾಗೂ 20ರಂದು ನಾಗರಕೊಯಿಲ್-ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ ಎಕ್ಸ್‌ಪ್ರೆಸ್‌ (16340), ಆ.21 ಹಾಗೂ 22 ರಂದು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌-ನಾಗರಕೊಯಿಲ್ (16339) ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದುಪಡಿಸಲಾಗಿದೆ.

ಆ.23ರಂದು ನಾಗರಕೊಯಿಲ್-ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ (16340) ಎಕ್ಸ್‌ಪ್ರೆಸ್‌ ರೈಲು ಮಧುರೈ, ಡಿಂಡಿಗಲ್, ಪೊಲ್ಲಾಚಿ, ಪಾಲಕ್ಕಾಡ, ಶೋರನೂರ, ಠೊಕುರ, ರೋಹಾ, ಪನ್ವೆಲ್ ಮಾರ್ಗವಾಗಿ ಸಾಗಲಿದೆ.

ಆ.23ರಂದು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌-ನಾಗರಕೊಯಿಲ್ (16339) ರೈಲು ಪನ್ವೆಲ್, ರೋಹಾ ಠೊಕುರ, ಶೋರನೂರ, ಪಾಲಕ್ಕಾಡ, ಪೊಲ್ಲಾಚಿ, ಡಿಂಡಿಗಲ್, ಮಧುರೈ ಮಾರ್ಗವಾಗಿ ಸಂಚರಿಸಲಿದೆ. ಆ.18ರಂದು ದಾದರ್‌-ಪುದುಚೆರಿ ಎಕ್ಸ್‌ ಪ್ರಸ್‌ (11005) ದಾದರ್‌ನಿಂದಲೇ ಪ್ರಯಾಣ ಬೆಳೆಸಲಿದೆ. ಆ.18ರಂದು ಮೈಸೂರು-ದಾದರ್‌ (11036) ಎಕ್ಸ್‌ಪ್ರೆಸ್‌ ರೈಲು ದಾದರ್‌ವರೆಗೂ ಸಂಚರಿಸಲಿದೆ.

ಆ.19ರಂದು ಕೊಯಿಮತ್ತೂರ- ಲೋಕಮಾನ್ಯ ತಿಲಕ್‌ ಟರ್ಮಿನಸ್‌ (11014) ಎಕ್ಸ್‌ಪ್ರೆಸ್‌ ರೈಲು ಲೋಕಮಾನ್ಯ ತಿಲಕ್‌ ಟರ್ಮಿನಸ್‌ವರೆಗೂ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next