Advertisement

ಬೈಕ್ ಗೆ ಢಿಕ್ಕಿ ಹೊಡೆದ ಅಪರಿಚಿತ ವಾಹನ: ಬೈಕ್ ಸವಾರ ಸ್ಥಳದಲ್ಲೇ ಸಾವು

09:28 PM Dec 30, 2021 | Team Udayavani |

ಸೊರಬ: ಅಪರಿಚಿತ ವಾಹನ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಆನವಟ್ಟಿಯಲ್ಲಿ ನಡೆದಿದೆ.

Advertisement

ಆನವಟ್ಟಿ ಪಟ್ಟಣದ ಚಾಮರಾಜ ಬಡಾವಣೆಯ ತರುಣ್ (18) ಮೃತ ದುರ್ಧೈವಿ.

ಆನವಟ್ಟಿಯಿಂದ ಶಿರಾಳಕೊಪ್ಪ ಮಾರ್ಗವಾಗಿ ತೆರಳುತ್ತಿದ್ದ ಬೈಕಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ. ಬೈಕ್ ಸವಾರ ತರುಣ್ ಸ್ಥಳದಲ್ಲೇ ಮೃತಪಟ್ಟಿದ್ದಾ‌ನೆ.

ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತರುಣ್ ಆನವಟ್ಟಿಯ ಭವಾನಿ ಹಾರ್ಡ್ ವೇರ್ ಮಾಲೀಕರ ಪುತ್ರನಾಗಿದ್ದು, ಉದಯೋನ್ಮುಖ ಕ್ರಿಕೇಟ್ ಆಟಗಾರನಾಗಿದ್ದನು.

Advertisement
Advertisement

Udayavani is now on Telegram. Click here to join our channel and stay updated with the latest news.

Next