Advertisement

ತುಮಕೂರು : ಚಿತ್ರಹಿಂಸೆ ನೀಡಿ ಇಬ್ಬರು ದಲಿತ ಯುವಕರ ಹತ್ಯೆ, ಕೆರೆಯಲ್ಲಿ ಪತ್ತೆಯಾಯ್ತು ದೇಹ

10:38 PM Apr 24, 2022 | Team Udayavani |

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು ದಲಿತ ಯುವಕರಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ನಡೆದಿದೆ.

Advertisement

ಪೆದ್ದನಹಳ್ಳಿ ಗ್ರಾಮದ ಗಿರೀಶ್‌ ಮೂಡಲಗಿರಿಯಪ್ಪ (30), ಮಂಚಲದೊರೆ ಗ್ರಾಮದ ಗಿರೀಶ್‌ (32) ಹತ್ಯೆಗೀಡಾದವರು.

ಗಿರೀಶ್‌ ಮೂಡಲಗಿರಿಯಪ್ಪ ಅವರ ದೇಹ ವಿರೂಪಗೊಂಡಿದ್ದು, ಜಮೀನಿನಲ್ಲಿ ಪತ್ತೆಯಾಗಿದೆ. ಮಂಚಲದೊರೆ ಗ್ರಾಮದ ಗಿರೀಶ್‌ ಅವರ ಮೃತದೇಹ ಗ್ರಾಮದ ಹೊರ ವಲಯದ ಕೆರೆಯಲ್ಲಿ ಪತ್ತೆಯಾಗಿದೆ. ಗ್ರಾಮಸ್ಥರು ದೇವಸ್ಥಾನದ ಉತ್ಸವ ಆಚರಿಸುತ್ತಿರುವಾಗ ಪ್ರಕರಣದ ಪ್ರಮುಖ ಆರೋಪಿಯೊಬ್ಬ, ಗಿರೀಶ್‌ ಮೂಡಲಗಿರಿಯಪ್ಪ ಅವರ ಮನೆಗೆ ತೆರಳಿ ಆತನ ಮನವೊಲಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ತನ್ನ ಸ್ನೇಹಿತರ ಜೊತೆ ಸೇರಿಕೊಂಡು ತೆಂಗಿನಮರದ ಗರಿಗಳಿಂದ ಸುಟ್ಟು ಚಿತ್ರಹಿಂಸೆ ನೀಡಿ ಹತ್ಯೆಗೈಯಲಾಗಿದೆ ಎಂದು ಶಂಕಿಸಲಾಗಿದೆ. ಮತ್ತೋರ್ವ ಗಿರೀಶ್‌ನನ್ನು ಇದೇ ರೀತಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಹತ್ಯೆ ಬಳಿಕ ಅವನ ದೇಹವನ್ನು ಕೆರೆಗೆ ಎಸೆಯಲಾಗಿದೆ ಎನ್ನಲಾಗಿದೆ. ಕೊಲೆ ಆರೋಪಿಗಳು ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಎಸ್ಪಿ ರಾಹುಲ್‌ ಕುಮಾರ್‌ ಶಹಾಪುರವಾಡ ತಿಳಿಸಿದ್ದಾರೆ.

Advertisement

ಈ ಕುರಿತು ಗುಬ್ಬಿ ತಾಲೂಕಿನ ಚೇಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next