Advertisement

ರಾಯಚೂರು: ಕಪ್ಪು ಹುಡುಗ ‌ಬೇಡ ಎಂದಿದ್ದಕ್ಕೆ ತಂಗಿ ಕೊಲೆಗೈದ ಅಣ್ಣ

01:34 PM Jul 11, 2021 | Team Udayavani |

ರಾಯಚೂರು: ತಾನು ಮದುವೆ ಆಗುವ ಹುಡುಗ ಕಪ್ಪು ಎಂದು ವಿವಾಹ ನಿರಾಕರಿಸಿದ ತಂಗಿಯನ್ನು ಅಣ್ಣ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.

Advertisement

ಜು.13ರಂದೇ ಮದುವೆ ನಿಶ್ಚಯವಾಗಿತ್ತು. ಆದರೆ, ಮದುವೆ ಬೇಡ ಎಂದು ಯುವತಿ ಹಠ ಹಿಡಿದ ಕಾರಣ ಕೋಪಗೊಂಡ ಅಣ್ಣ ಈ ಕೃತ್ಯ ಎಸಗಿದ್ದಾನೆ.

ಇದನ್ನೂ ಓದಿ: ಪದ್ಮ ಪ್ರಶಸ್ತಿಗಾಗಿ ಸಾಧಕರನ್ನು ನಾಮನಿರ್ದೇಶನ ಮಾಡಿ: ನಾಗರಿಕರಿಗೆ ಪ್ರಧಾನಿ ಮೋದಿ ವಿನಂತಿ

ಚಂದ್ರಕಲಾ ( 22) ಕೊಲೆಯಾದ ಯುವತಿ. ಅಣ್ಣ ಶ್ಯಾಮಸುಂದರ ಕೊಲೆಗೈದ ಯುವಕ.  ಮನೆಯವರು ಮದುವೆಗೆ ಲಗ್ನ ಪತ್ರಿಕೆ ಸಹ ಹಂಚಿಕೆ ‌ಮಾಡಿದ್ದು, ಇಲ್ಲಿಗಾಗಲೇ ಸಾಕಷ್ಟು ಖರ್ಚು ಮಾಡಿದ್ದರು.

ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next