Advertisement

ನೆಲ್ಯಾಡಿ: ತಾವರೆ ಹೂವಿನ ಗಿಡ ಬಿಡಲು ಕೆರೆಯತ್ತ ಹೋಗಿದ್ದಾಕೆ ಮರಳಿ ಬರಲೇ ಇಲ್ಲ.!

01:27 PM Nov 15, 2021 | Team Udayavani |

ನೆಲ್ಯಾಡಿ: ಮನೆ ಪಕ್ಕದ ಕೆರೆಯೊಂದಕ್ಕೆ ತಾವರೆ ಹೂವಿನ ಗಿಡ ಬಿಡಲು ಹೋಗಿದ್ದ ವಿದ್ಯಾರ್ಥಿನಿಯೊಬ್ಬಳು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ದುರಂತ ಘಟನೆ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

Advertisement

ಶ್ರೇಯಾ (18) ಮೃತ ದುರ್ಧೈವಿ. ಈಕೆ ಅಂಬರ್ಜೆ ನಿವಾಸಿ ಮೋಹನ ಹಾಗೂ ವಿನೋದ ದಂಪತಿಯ ಪುತ್ರಿ. ಶ್ರೇಯಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.

ಇದನ್ನೂ ಓದಿ: ತುಮಕೂರು: ವಾಚ್ ಮ್ಯಾನ್ ನನ್ನು ಭೀಕರವಾಗಿ ಕೊಲೆಗೈದು ಬ್ಯಾಂಕ್ ದರೋಡೆ ಮಾಡಿದ ಕಳ್ಳರು.!

ಶ್ರೇಯಾ ಬೆಳಿಗ್ಗೆ ತಮ್ಮ ಮನೆಯ ಪಕ್ಕದ ಕೆರೆಗೆ ತಾವರೆ ಹೂವಿನ ಗಿಡ ಬಿಡಲೆಂದು ಹೋಗಿದ್ದಳು. ಹೂವಿನ ಗಿಡ ಬಿಡುವ ವೇಳೆ ಆಕಸ್ಮಿಕವಾಗಿ ಶ್ರೇಯಾಳ ಕಾಲು ಜಾರಿ, ಆಕೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಗಿಡ ಬಿಡಲು ಹೋಗಿದ್ದ ಶ್ರೇಯಾ ಮನೆಗೆ ಬಾರದ ವೇಳೆ, ಮನೆಯವರು ಕೆರೆ ಕಡೆ ಹೋಗಿ ನೋಡಿದಾಗ, ಘಟನೆ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next