Advertisement

ಹೆತ್ತವರ ವಿರುದ್ಧವೇ ಪತ್ರಬರೆದಿಟ್ಟು ಪುತ್ರ ಆತ್ಮಹತ್ಯೆ

10:28 PM Sep 09, 2021 | Team Udayavani |

ನಾಗಮಂಗಲ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾನಸಿಕ ಖನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನಾಗತೀಹಳ್ಳಿಯಲ್ಲಿ ನಡೆದಿದೆ.

Advertisement

ಗ್ರಾಮದ ನಿವೃತ್ತ ಶಿಕ್ಷಕ ಎನ್‌.ಸಿ.ರಾಜು ಮತ್ತು ಶಿಕ್ಷಕಿ ದೇವಮಣಿ ದಂಪತಿಯ ಮಗ ಗಿರೀಶ್‌ ಅಲಿಯಾಸ್‌ ಕೇಶವಮೂರ್ತಿ(32)  ಆತ್ಮಹತ್ಯೆ ಮಾಡಿಕೊಂಡವರು.

12 ವರ್ಷಗಳ ಹಿಂದೆ ಮದುವೆ:

ಯಾಗಿದ್ದರೂ ಇವರಿಗೆ  ಮಕ್ಕಳಾಗಿರ ಲಿಲ್ಲ. ಈ ಕಾರಣದಿಂದ ಹೆತ್ತವರ ಜತೆ ಸಣ್ಣಪುಟ್ಟ ಜಗಳವಾಗುತ್ತಿತ್ತು. ಬಳಿಕ   ಖನ್ನತೆಗೊಳಗಾಗಿದ್ದ ಗಿರೀಶ್‌ 2 ತಿಂಗಳ ಹಿಂದೊಮ್ಮೆ ಮನೆ ಬಿಟ್ಟು ಹೋಗಿದ್ದರು. ಅವರು ಹುಡುಕಿ ಕರೆತಂದ ಬಳಿಕ  ಎಲ್ಲಿಗೂ ಹೋಗದಂತೆ ಪತ್ನಿ ನೋಡಿಕೊಳ್ಳುತ್ತಿ ದ್ದರು. ಸೆ. 8ರಂದು ಪತ್ನಿ ಹೊರ ಹೋಗಿದ್ದಾಗ ಗಿರೀಶ್‌ ಆತ್ಮಹತ್ಯೆ ಮಾಡಿಕೊಂಡಿದ್ದರು.

 ಡೆತ್‌ನೋಟ್‌ : “ನನ್ನ ಸಾವಿಗೆ ತಂದೆ ತಾಯಿಯೇ ಕಾರಣ’ ಎಂದು ಗಿರೀಶ್‌ ಬರೆದಿದ್ದೆಂದು ಹೇಳಲಾಗಿರುವ ಪತ್ರ ಸಿಕ್ಕಿದೆ. ಆದರೆ ಗಿರೀಶ್‌ ಪತ್ನಿ ಇದನ್ನು ನಿರಾಕರಿಸಿದ್ದು, ಅವರ ಸಾವಿಗೆ  ಯಾರೂ ಕಾರಣರಲ್ಲ. ಅವರ ಮಾನಸಿಕ ಖನ್ನತೆಯಿಂದಲೇ ಈ ಕೃತ್ಯ ಎಸಗಿದ್ದಾರೆ ಎಂದು  ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next